ಎತ್ತಿನ ಗಾಡಿಗೆ ವಿದ್ಯುತ್ ಸ್ಪರ್ಶ: ಎತ್ತು ಸಾವು

156

Get real time updates directly on you device, subscribe now.

ಶಿರಾ: ಎತ್ತಿನಗಾಡಿಯಲ್ಲಿ ಕಬ್ಬಿಣದ ಪೆಟ್ಟಿಗೆ ಸಾಗಿಸುವಾಗ ವಿದ್ಯುತ್ ಪ್ರವಹಿಸಿ ಎತ್ತು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಕೊಳದಪ್ಪಲೇಶ್ವರಸ್ವಾಮಿ ದೇಗುಲ ರಸ್ತೆ ಕೇಶವ ನಗರದಲ್ಲಿ ಈ ಘಟನೆ ಸಂಭವಿಸಿದ್ದು, ಎತ್ತಿನಗಾಡಿಯಲ್ಲಿ ಎತ್ತರದ ಕಬ್ಬಿಣದ ಪೆಟ್ಟಿಗೆ ಸಾಗಿಸುವಾಗ ಹೈಟೆನ್ಷನ್ ವಿದುತ್ ವೈರ್ ಗೆ ಪೆಟ್ಟಿಗೆ ತಾಕಿದೆ. ಗಾಡಿ ಚಲಾಯಿಸುತ್ತಿದ್ದ ಮಹಮ್ಮದ್ ಅಬ್ಬಾಸ್ ತಕ್ಷಣ ಜಿಗಿದಿದ್ದರಿಂದ ಸ್ವಲ್ಪದರಲ್ಲಿ ಬಚಾವ್ ಆಗಿದ್ದಾನೆ. ಧರಿಸಿದ್ದ ಬಟ್ಟೆ ಪೂರ್ತಿ ಸುಟ್ಟು ಹೋಗಿದೆ, ಸಣ್ಣ ಪುಟ್ಟ ಗಾಯಗಳಾಗಿ ಅಸ್ಪತ್ರೆಗೆ ದಾಖಲಾಗಿದ್ದು ಸಾವಿನ ದವಡೆಯಿಂದ ಪಾರಾಗಿದ್ದಾನೆ.
ವಿದ್ಯುತ್ ಶಾಕ್ ಗೆ ಸಿಲುಕಿದ ಎತ್ತು ಸ್ಥಳದಲ್ಲೇ ಅಸುನೀಗಿದೆ. ಸಂಬಂಧಪಟ್ಟ ಬೆಸ್ಕಾಂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!