ತಂದೆಯನ್ನೇ ಕೊಂದ ಮಗ

235

Get real time updates directly on you device, subscribe now.

ಶಿರಾ: ಪ್ರೀತಿಸಿ ಮದುವೆಯಾದ ಮಗನ ವಿವಾಹ ಒಪ್ಪದ ತಂದೆಯು ಮಗನೊಂದಿಗೆ ಜಗಳ ಮಾಡುತ್ತಿದ್ದಾಗ ಆಕ್ರೋಶಗೊಂಡ ಮಗ ತಂದೆಯ ತಲೆಗೆ ಬಲವಾಗಿ ಹೊಡೆದ ಪರಿಣಾಮ ತಂದೆ ಮೃತಪಟ್ಟಿರುವ ಘಟನೆ ತಾಲ್ಲೂಕಿನ ದ್ವಾರನಕುಂಟೆ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ತಂದೆಯ ಹೆಸರು ಲಕ್ಷ್ಮಣ್‌(50) ಎಂದು ತಿಳಿದು ಬಂದಿದ್ದು, ಕೊಲೆ ಆರೋಪಿ ಹರೀಶ್‌ (28) ಎನ್ನಲಾಗಿದೆ.
ಘಟನೆಯ ವಿವರ: ದ್ವಾರನಕುಂಟೆ ಗ್ರಾಮದ ಹರೀಶ್‌ ಕಳೆದ 6 ವರ್ಷಗಳ ಹಿಂದೆ ವಿಚ್ಚೇದಿತ ಮಹಿಳೆಯನ್ನು ಪ್ರೇಮಿಸಿ ವಿವಾಹವಾಗಿದ್ದ ಎನ್ನಲಾಗಿದ್ದು, ಈ ಮದುವೆ ತಂದೆ ಲಕ್ಷ್ಮಣ್ ಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಸ್ವಗ್ರಾಮದಲ್ಲಿ ಚಿಲ್ಲರೆ ಅಂಗಡಿ ಇಟ್ಟು ಕೊಂಡಿದ್ದ ಹರೀಶನ ಅಂಗಡಿಗೆ ತಂದೆಯೇ ಬೆಂಕಿ ಇಟ್ಟಿದ್ದ ಎನ್ನಲಾಗಿದೆ, ಹರೀಶ್‌ ಮತ್ತು ತಂದೆ ಲಕ್ಷ್ಮಣ್‌ ನಡುವೆ ಜಗಳ ನಡೆದಿದೆ ಈ ವೇಳೆ ಬಡಿಗೆಯಿಂದ ತಂದೆ ಮೇಲೆ ಹಲ್ಲೆ ಮಾಡಿದ ಪರಿಣಾಮ ಲಕ್ಷ್ಮಣ್‌ ಸಾವಪ್ಪಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ಕೈಗೊಂಡಿರುವ ಪಟ್ಟನಾಯಕನಹಳ್ಳಿ ಪೊಲೀಸ್‌ ಠಾಣಾ ಪಿ ಎಸ್ ಐ ಭಾಸ್ಕರ್‌ ಆರೋಪಿ ಹರೀಶನನ್ನು ಬಂಧಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!