ಕುಡುಕ ಮಗನಿಂದ ಮಚ್ಚಿನಿಂದ ಪೋಷಕರ ಮೇಲೆ ಹಲ್ಲೆ

293

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ಕುಡುಕ ಮಗನಿಂದ ಹಾಡುಹಗಲೇ ಮಚ್ಚಿನಿಂದ ತಂದೆ-ತಾಯಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಚಿನಾಹಳ್ಳಿ ತಾಲ್ಲೂಕು ಕಂದಿಕೆರೆ ಹೋಬಳಿ ಜಾಣೇಹಾರ್‌ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.
ದಿನ ನಿತ್ಯ ಮದ್ಯಪಾನ ಮಾಡಿ ಕುಟುಂಬದವರಿಗೆ ಬೆದರಿಸಿ ದಿನ ನಿತ್ಯ ಮದ್ಯ ಸೇವಿಸಲು ಐನೂರು, ಸಾವಿರ ಹಣಕ್ಕೆ ಬೇಡಿಕೆ ಇಟ್ಟು ತಂದೆ, ತಾಯಿ, ಹೆಂಡತಿ, ಪುಟಾಣಿ ಮಕ್ಕಳ ಮೇಲೂ ಹಲ್ಲೆ, ಬೈಗುಳದಿಂದ ನಿತ್ಯ ಜಗಳವಾಡುತ್ತಿದ್ದ ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ ತೋಟದ ಮನೆಯ ಬಳಿ ಜಮೀನಿನಲ್ಲಿ ಕೆಲಸ ಮಡುತ್ತಿದ್ದ ತಂದೆ, ತಾಯಿ ಹಾಗೂ ಪತ್ನಿಯ ಮೇಲೆ ಜಗಳ ತೆಗೆದು ಕುಡಿಯಲು ಹಣಕೊಡುವಂತೆ ಪೀಡಿಸಿ ಹಣ ನೀಡದಿದ್ದರಿಂದ ಕುಪಿತಗೊಂಡ ದೇವರಾಜು (28) ಎಂಬಾತ ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲ ಎಂದು ಏಕಾಏಕಿ ಮಚ್ಚಿನಿಂದ ಮನಸೋ ಇಚ್ಛೆ ತಂದೆಯ ಎಡಕೈಗೆ ಪೆಟ್ಟು ಮಾಡಿ, ಎದೆ, ಹೊಟ್ಟೆ ಭಾಗಕ್ಕೆ ಕಲ್ಲಿನಿಂದ ಗುದ್ದಿದ್ದಾನೆ. ಪತ್ನಿಯ ತಲೆ ಹಾಗೂ ಎದೆ ಭಾಗಕ್ಕೆ ಮಚ್ಚಿನಿಂದ ಸೀಳಿ ಅಧಿಕ ರಕ್ತ ಸ್ರಾವ ಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿ ದ್ದರಿಂದಜೀವ ಉಳಿಸಿಕೊಳ್ಳಲು ಕೂಗಿ ಚೀರಾಡುತಿದ್ದ ಸಮಯದಲ್ಲಿ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ದಾವಿಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿವಣ್ಣ (57) ಹಾಗೂ ಪತ್ನಿ ಲೀಲಾವತಿ (26) ಹಾಗೂ ತಾಯಿಯನ್ನುಆಟೋ ಮೂಲಕ ಚಿನಾಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ತುರ್ತು ವಿಭಾಗಕ್ಕೆ ದಾಖಲಿಸಿ, ತಕ್ಷಣ ವೈದ್ಯರಿಂದ ಗಾಯಳುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಪ್ರಾಣಪಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಚಿನಾಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿದ್ದು ಆರೋಪಿಯನ್ನು ಬಂದಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!