ಟಾಟಾ ಏಸ್ ಡಿಕ್ಕಿ- ಸೈಕಲ್ ಸವಾರ ಸಾವು

389

Get real time updates directly on you device, subscribe now.

ತುರುವೇಕೆರೆ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ಪುಟ್ಟಮಾದಿಹಳ್ಳಿ ಬಳಿ ಸೈಕಲ್ ಸವಾರನಿಗೆ ಟಾಟಾ ಏಸ್ ಆಟೋ ಗುದ್ದಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತನು ಆಯರಹಳ್ಳಿ ಗ್ರಾಮದ ಅಣ್ಣಪ್ಪ (45), ಈತನು ಪುಟ್ಟಮಾದಿಹಳ್ಳಿಯಿಂದ ಸೈಕಲ್ನಲ್ಲಿ ಆಯರಹಳ್ಳಿಗೆ ಬರುವಾಗ ಕಲ್ಲೂರ್ ಕ್ರಾಸ್ ಕಡೆಯಿಂದ ಬಂದ ಟಾಟಾ ಏಸ್ ಆಟೋ ಗುದ್ದಿದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದೆ. ಅಣ್ಣಪ್ಪನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆಂದು ಪಟ್ಟಣದ ಪೊಲೀಸರು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!