ಕೊರೊನಾದಿಂದ ತಂದೆ ಕಳೆದುಕೊಂಡ ಬಡ ಕುಟುಂಬ

ಮಕ್ಕಳ ಆಕ್ರಂದನ ಕಂಡು ಕಣ್ಣೀರು ಹಾಕಿದ ಶಾಸಕ

261

Get real time updates directly on you device, subscribe now.

ಶಿರಾ: ಮನಕಲಕುವ ಮಕ್ಕಳ ಸ್ಥಿತಿ ಕಂಡು ಶಾಸಕ ರಾಜೇಶ್‌ಗೌಡ ಕಂಬನಿ ಮಿಡಿದಿದ್ದಾರೆ, ಶಿರಾ ತಾಲೂಕಿನ ಯಲಪೇನಹಳ್ಳಿಯ ದಲಿತ ಕುಟುಂಬದ ನಾಗರಾಜು ಕೊವಿಡ್‌ ಸೊಂಕಿನಿಂದ ಮೃತ ಪಟ್ಟಿದ್ದು, ಕುಟುಂಬದವರಿಗೆ ಸಾಂತ್ವನ ಹೇಳಲು ಹೋಗಿದ್ದ ಶಾಸಕ ರಾಜೇಶ್‌ ಗೌಡ, ಮೃತ ನಾಗರಾಜುವಿನ ಪುಟ್ಟ ಮಕ್ಕಳ ಆಕ್ರಂದನ ಕಂಡು ಬಾವುಕರಾಗಿ ಕಂಬನಿ ಮಿಡಿದರು.
ಈ ವೇಳೆ ಮಾತನಾಡಿದ ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ, ಚಿಕ್ಕ ವಯಸ್ಸಿನಲ್ಲಿ ಇಂತಹ ಸ್ಥಿತಿಗೆ ಕುಟುಂಬಗಳು ಬಂದರೆ ಜೀವನ ಕಷ್ಟಕರವಾಗಲಿದೆ, ಇಂತಹ ಸ್ಥಿತಿ ನೋಡಿ ಬೇಸರವಾಗಿದ್ದು ಸಾರ್ವಜನಿಕರು ಹೆಚ್ಚು ಜಾಗೃತಿ ವಹಿಸುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ನಾಗರಾಜು ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿ ಸಾಂತ್ವನ ಹೇಳಿದರು.

ದೇವರೇ ನೀನು ಕ್ರೂರಿಯಾಗ ಬೇಡ, ಮನುಕುಲ ಕಾಪಾಡು: ಕೊರೊನಾ ಸೋಂಕು ನಿರಂತವಾಗಿ ಮನುಕುಲಕ್ಕೆ ಕಂಟಕವಾಗಿ ಕಾಡುತ್ತಿದ್ದು, ಸೋಂಕಿತರ ಸಾವು ನನ್ನ ಹೃದಯ ಭಾರವಾಗುವಂತೆ ಮಾಡಿದೆ, ಸಂಸಾರದ ಕಣ್ಣುಗಳಾಗಿ ಪುಟ್ಟ ಪುಟ್ಟ ಮಕ್ಕಳಿಗೆ ತಂದೆಯಾಗಿ ಪ್ರೀತಿ ವಾತ್ಸಲ್ಯ ತೊರಬೇಕಾದ ಜೀವ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವುದು ಹೆಚ್ಚು ನೋವು ತಂದಿದೆ, ದೇವರೆ ನೀನು ಕ್ರೂರಿಯಾಗ ಬೇಡ ಮನುಕುಲ ರಕ್ಷಣೆ ಮಾಡು ಎಂದು ಶಾಸಕರು ಕೋರಿದರು.
ತಹಸೀಲ್ದಾರ್‌ ಮಮತ, ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಣ್‌ ಸೇರಿದಂತೆ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!