ಕೊರೊನಾಗೆ ಗ್ರಾಪಂ ಸದಸ್ಯ ಗಂಗಣ್ಣ ಬಲಿ

517

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ಹಡವನಹಳ್ಳಿ ಗ್ರಾಪಂ ಸದಸ್ಯ ಮಾರಸಂದ್ರ ಗಂಗಣ್ಣ (65) ಕೊರೊನಾ ಮಾರಿಗೆ ಬಲಿಯಾಗಿದ್ದಾರೆ.
ಮಾರಸಂದ್ರ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಆರಿಸಿ ಬಂದಿದ್ದ ಗಂಗಣ್ಣ ಅವರಿಗೆ ಕಳೆದ 3 ದಿನಗಳ ಹಿಂದೆಯಷ್ಟೇ ಕೊರೊನಾ ಸೋಂಕಿಗೊಳಗಾಗಿದ್ದರು. ಸೋಮವಾರ ಬೆಳಗ್ಗೆ ತೀವ್ರ ಅಸ್ವಸ್ಥರಾದ ಗಂಗಣ್ಣ ಅವರನ್ನು ತಿಪಟೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಗಿ ಕುಟುಂಬದವರು ತಿಳಿಸಿದ್ದಾರೆ.
ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಗಂಗಣ್ಣ ಅಗಲಿದ್ದಾರೆ.
ಗ್ರಾಪಂ ಸದಸ್ಯ ಗಂಗಣ್ಣ ನಿಧನಕ್ಕೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಅಮ್ಮಸಂದ್ರ ಗ್ರಾಪಂ ಸದಸ್ಯ ಸಿದ್ದಗಂಗಯ್ಯ, ದಂಡಿನಶಿವರ ರಾಜಕುಮಾರ್, ಹಡವನಹಳ್ಳಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸಹ ಸದಸ್ಯರು ಸಂತಾಪ ಸೂಚಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!