ಮೀಸೆ ಕಿಟ್ಟಣ್ಣ ಇನ್ನಿಲ್ಲ

1,649

Get real time updates directly on you device, subscribe now.

ತುಮಕೂರು: ನಗರದ ಹೆಸರಾಂತ ಭಾರದ್ವಾಜ್ ಗ್ರೂಪ್ಸ್ ಅಡಿಗೆ ಕಂಟ್ರಾಕ್ಟರ್ ಕೆ.ಜಿ.ಕೃಷ್ಣಮೂರ್ತಿ (೫೫) ಅವರು ಇಂದು ನಿಧನ ಹೊಂದಿದ್ದಾರೆ.
ಮೀಸೆ ಕಿಟ್ಟಣ್ಣ ಎಂದು ಹೆಸರುವಾಸಿ ಆಗಿದ್ದ ಇವರು ವಿಪ್ರ ಸಮುದಾಯದ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಈಚೆಗೆ ನಡೆದ ಶತರುದ್ರ ಯಾಗದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರ ನಿಧನದಿಂದ ವಿಪ್ರ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್ ಕಂಬನಿ ಮಿಡಿದಿದ್ದಾರೆ. ಮಾಧ್ವ ಸಂಪ್ರದಾಯದಂತೆ ಚಿಕ್ಕಪೇಟೆ ಮುಕ್ತ ಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಸಂತಾಪ: ಜಿಲ್ಲಾ ಬ್ರಾಹ್ಮಣ ಸಭಾದ ಪ್ರಧಾನ ಕಾರ್ಯದರ್ಶಿ ಯು.ಸುರೇಶ ಹೊಳ್ಳ, ಸಹ ಕಾರ್ಯದರ್ಶಿ ಚಂದ್ರಶೇಖರ್, ಉದ್ಯಮಿ ಎಚ್.ಜಿ.ಚಂದ್ರಶೇಖರ್, ವಿಜಯೇಂದ್ರ ಕೃಷ್ಣಮೂರ್ತಿ, ಡಾ.ಹರೀಶ್ ವಸಿಷ್ಠ ಹಾಗೂ ಅಪಾರ ಬಂಧು ಮಿತ್ರರು ಸಂತಾಪ ಸೂಚಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!