ಗ್ರಾಪಂ ಸಿಬ್ಬಂದಿಯಿಂದ ಮಹಿಳೆ ಅಂತ್ಯಸಂಸ್ಕಾರ

590

Get real time updates directly on you device, subscribe now.

ಮಧುಗಿರಿ: ತಾಲೂಕಿನ ಬಡವನಹಳ್ಳಿಯಲ್ಲಿ ಕೊರೊನಾ ಸೋಂಕಿತ ಮಹಿಳೆಯೊಬ್ಬರು ಮೃತಪಟ್ಟಿದ್ದು ಅಂತ್ಯ ಸಂಸ್ಕಾರಕ್ಕೆ ಸಂಬಂಧಿಕರು ಯಾರು ಬಾರದ ಕಾರಣ ಪಿಡಿಒ ಮತ್ತು ಗ್ರಾಮಲೆಕ್ಕಾಧಿಕಾರಿ ಜೊತೆಗೆ ಸ್ವಯಂ ಸೇವಕರೆ ಅಂತ್ಯಸಂಸ್ಕಾರ ನಡೆಸಿದ ಘಟನೆ ನಡೆದಿದೆ.
ಬಡವನಹಳ್ಳಿ ಗ್ರಾಮದ ಮಹಿಳೆಯೊಬ್ಬರು ಕೊರೊನಾ ಸೋಂಕಿನಿಂದ ಶುಕ್ರವಾರ ಮೃತಪಟ್ಟಿದ್ದು, ಸಂಬಂಧಿಕರು ಯಾರೂ ಅಂತಿಮ ಸಂಸ್ಕಾರ ನೆರವೇರಿಸಲು ಬರಲಿಲ್ಲ, ಅಲ್ಲದೆ ರಂಜಾನ್‌ ಹಬ್ಬವಿದ್ದ ಕಾರಣ ಮಧುಗಿರಿಯಲ್ಲಿನ ಮುಸ್ಲಿಂ ಸಮುದಾಯದ ಸ್ವಯಂ ಸೇವಕರೂ ಬಾರದ ಕಾರಣ ಅದೇ ಗ್ರಾಮದ ಬಾವಿಮನೆ ರಂಗನಾಥ್‌, ನೂರ್‌ ಜಾನ್‌, ರವಿ, ಮೆಹಬೂಬ್‌ ಪಾಷ ಇವರು ಸ್ವಯಂಪ್ರೇರಿತ ರಾಗಿ ಬಂದು ಪಿಡಿಒ ಶಿಲ್ಪ, ಗ್ರಾಮ ಲೆಕ್ಕಾಧಿಕಾರಿ ನವೀನ್‌ ಕುಮಾರ್‌ ಮತ್ತು ಆರೋಗ್ಯ ಇಲಾಖೆಯರವರೊಂದಿಗೆ ಜೊತೆಗೂಡಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಕಳೆದ ಭಾನುವಾರ ಇದೇ ಕುಟುಂಬದಲ್ಲಿ ಯುವಕ ಕೂಡ ಮೃತಪಟ್ಟಿದ್ದು ಭಯದಿಂದ ಸಂಬಂಧಿಕರು ಯಾರೂ ಬಂದಿರಲಿಲ್ಲ.

Get real time updates directly on you device, subscribe now.

Comments are closed.

error: Content is protected !!