ಹಿರಿಯ ವಕೀಲ ಬಿ.ದೊಡ್ಡಮಲ್ಲಯ್ಯ ನಿಧನ

525

Get real time updates directly on you device, subscribe now.

ಶಿರಾ: ಶಿರಾ ತಾಲ್ಲೂಕಿನ ಹಿರಿಯ ವಕೀಲರು, ನೋಟರಿಗಳಾಗಿದ್ದ ಬಿ.ದೊಡ್ಡಮಲ್ಲಯ್ಯ (58) ಅವರು ಕೊರೊನಾ ಸೋಂಕಿನಿಂದ ಶನಿವಾರ ಮೃತಪಟ್ಟಿದ್ದಾರೆ.
ಕೋವಿಡ್‌ ಸೋಂಕು ತಗುಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು, ಬೆಂಗಳೂರಿನ ಬೌರಿಂಗ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಸಂತಾಪ: ಹಿರಿಯ ವಕೀಲರು ಹಾಗೂ ನೋಟರಿಗಳಾಗಿದ್ದ ಬಿ.ದೊಡ್ಡಮಲ್ಲಯ್ಯ ಅವರ ನಿಧನಕ್ಕೆ ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ವಕೀಲರ ಸಂಘದ ಅಧ್ಯಕ್ಷ ಧರಣೇಶ್‌ಗೌಡ, ಉಪಾಧ್ಯಕ್ಷ ವೈ.ಟಿ.ರಾಮಚಂದ್ರಪ್ಪ, ಖಜಾಂಚಿ ಹೆಚ್‌.ಗುರುಮೂರ್ತಿ, ಕಾರ್ಯದರ್ಶಿ ಕಂಬದೂರಪ್ಪ, ಜಂಟಿ ಕಾರ್ಯದರ್ಶಿ ರಾಮಕೃಷ್ಣ ಸಂತಾಪ ಸೂಚಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!