ಟಿಎಂಸಿಸಿಯಿಂದ ಆರೋಗ್ಯ ಪರಿಕರಗಳ ವಿತರಣೆ

155

Get real time updates directly on you device, subscribe now.

ತುಮಕೂರು: ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರ ಚಿಕಿತ್ಸೆಗೆ ಅನುವಾಗುವಂತೆ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್‌ ಕೋ ಆಪರೇಟಿಸ್‌ ಸೊಸೈಟಿಯು ಪಾವಗಡದ ಜಪಾನಂದ ಸ್ವಾಮೀಜಿಯವರ ಆಸ್ಪತ್ರೆಗೆ ಸುಮಾರು 5 ಲಕ್ಷ ರೂ. ವೆಚ್ಚದ ಹಾಸಿಗೆಯುಳ್ಳ ಮಂಚ, ಟೇಬಲ್‌ ಸೇರಿದಂತೆ ಇನ್ನಿತರೆ ಆರೋಗ್ಯ ಸೇವೆಗೆ ಅಗತ್ಯ ಇರುವ ವಸ್ತುಗಳನ್ನು ಹಸ್ತಾಂತರಿಸಲಾಯಿತು.
ಟಿಎಂಸಿಸಿ ಬ್ಯಾಂಕ್‌ ಅಧ್ಯಕ್ಷ ಎನ್‌.ಎಸ್‌.ಜಯಕುಮಾರ್‌ ಅವರ ನೇತೃತ್ವದಲ್ಲಿ ಪಾವಗಡದ ಜಪಾನಂದಜಿ ಅವರಿಗೆ ಆರೋಗ್ಯ ಸೇವೆಗೆ ಅಗತ್ಯವಿರುವ ಉಪಕರಣಗಳ ಕುರಿತು ಪಟ್ಟಿ ನೀಡುವಂತೆ ಮನವಿ ಮಾಡಲಾಗಿತ್ತು.
ಶ್ರೀಗಳು ಸಲ್ಲಿಸಿದ್ದ ಪಟ್ಟಿಯಂತೆ ಅವರ ಆಸ್ಪತ್ರೆಗೆ ಟಿಎಂಸಿಸಿ ಬ್ಯಾಂಕ್‌ ವತಿಯಿಂದ ಆರೋಗ್ಯ ಸೇವೆಗೆ ಸಂಬಂಧಿಸಿದ ಸಲಕರಣೆಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟಿಎಂಸಿಸಿ ಬ್ಯಾಂಕ್‌ ಅಧ್ಯಕ್ಷ ಎನ್‌.ಎಸ್‌.ಜಯಕುಮಾರ್‌, ಕೋವಿಡ್‌ ಸಂಕಷ್ಟದ ಕಾಲ ಇದು, ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ತೊಂದರೆಗೆ ಒಳಗಾಗಿರುವ ಜನರಿಗೆ ಸೇವೆ ಮಾಡಲು ಇದೊಂದು ಸದಾವಕಾಶ ದೊರೆತಿದೆ, ನಮ್ಮ ಕೈಲಾದಷ್ಟು ಮಟ್ಟಿಗೆ ಸೇವೆ ಮಾಡಲು ಸಿದ್ಧರಾಗಿದ್ದೇವೆ ಎಂದರು.
ಪಾವಗಡದ ಜಪಾನಂದ ಸ್ವಾಮೀಜಿಯವರನ್ನು ನಾವೇ ಸಂಪರ್ಕಿಸಿ ಆರೋಗ್ಯ ಸೇವೆಗೆ ಅಗತ್ಯ ಇರುವ ವಸ್ತುಗಳನ್ನು ಪಟ್ಟಿ ಮಾಡಿ ಕೊಡುವಂತೆ ಮನವಿ ಮಾಡಿದ್ದೆವು, ಅದರಂತೆ ಶ್ರೀಗಳು ಪಟ್ಟಿ ನೀಡಿದ್ದರು, ಹಾಗಾಗಿ ಹಾಸಿಗೆಯುಳ್ಳ ಮಂಚ ಸೇರಿದಂತೆ ಇನ್ನಿತರೆ ಆರೋಗ್ಯ ಸೇವೆಗೆ ಅಗತ್ಯ ಇರುವ ವಸ್ತುಗಳನ್ನು ನೀಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಟಿಎಂಸಿಸಿ ಉಪಾಧ್ಯಕ್ಷ ಶ್ರೀಕರ, ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇದ್ದರು.

Get real time updates directly on you device, subscribe now.

Comments are closed.

error: Content is protected !!