ಪತ್ರಕರ್ತ, ಶಿಕ್ಷಕ ಸಂಜೀವಯ್ಯ ನಿಧನ

589

Get real time updates directly on you device, subscribe now.

ಗುಬ್ಬಿ: ತಾಲ್ಲೂಕಿನ ಹಿರಿಯ ಪತ್ರಕರ್ತ ಹಾಗೂ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಕೆ.ಎಚ್‌.ಸಂಜೀವಯ್ಯ (55) ಅನಾರೋಗ್ಯಕ್ಕೆ ತುತ್ತಾಗಿ ಶುಕ್ರವಾರ ಮುಂಜಾನೆ ಪಟ್ಟಣದ ಕುವೆಂಪುನಗರ ಬಡಾವಣೆಯ ತಮ್ಮ ನಿವಾಸದಲ್ಲಿ ದೈವಾಧೀನರಾದರು.
ತಾಲ್ಲೂಕಿನ ಅಮ್ಮನಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೃತರು ಕಳೆದ 30 ವರ್ಷಗಳಿಂದ ಹವ್ಯಾಸಿ ಪತ್ರಕರ್ತರಾಗಿ ಹಲವು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಸಮಾಜದ ಹಲವು ಕ್ಷೇತ್ರಗಳನ್ನು ಬಿಂಬಿಸುವ ನಿಷ್ಠ ವರದಿ ಮಾಡುತ್ತಾ ಉತ್ತಮ ವರದಿಗಾರರಾಗಿ ಸಹ ಪ್ರಶಸ್ತಿ ಗಳಿಸಿದ್ದರು. ಹಿರಿಯರಾಗಿ ಈಚೆಗೆ ಪತ್ರಿಕಾರಂಗಕ್ಕೆ ಬಂದ ಕಿರಿಯ ವರದಿಗಾರರಿಗೆ ಮಾರ್ಗದರ್ಶನ ನೀಡುತ್ತಾ ಪತ್ರಿಕೆಯ ವಸ್ತುನಿಷ್ಠೆ ಬಗ್ಗೆ ತಿಳುವಳಿಕೆ ನೀಡುತ್ತಿದ್ದರು. ಇವರ ಅಕಾಲಿಕ ಸಾವು ಇಡಿ ಮಾಧ್ಯಮ ರಂಗಕ್ಕೆ ಅಘಾತ ತಂದಿದೆ.
ಪ್ರಜಾಪ್ರಗತಿ ಪತ್ರಿಕೆಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ಸಂಜೀವಯ್ಯಅವರು ಸ್ನೇಹಜೀವಿಯಾಗಿ ಹಾಗೂ ಸರಳ ವ್ಯಕ್ತಿತ್ವಕ್ಕೆ ಹೆಸರುಗಳಿಸಿದ್ದರು. ಲಯನ್ಸ್ ಸಂಸ್ಥೆ, ಸರ್ಕಾರಿ ನೌಕರರ ಸಂಘದ ಸದಸ್ಯರಾಗಿ ಸೇವಾ ಕಾರ್ಯ ಮಾಡಿದ್ದ ಇವರು ಶ್ರೀವೈಷ್ಣವ ಮಹಾಸಭಾ ಸದಸ್ಯರಾಗಿ ಧಾರ್ಮಿಕ ಚಟುವಟಿಕೆಯಲ್ಲೂ ಸೈ ಎನಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಸ್ವಗ್ರಾಮ ಕಿಟ್ಟದಕುಪ್ಪೆಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

Get real time updates directly on you device, subscribe now.

Comments are closed.

error: Content is protected !!