ಯೋಗೀಶ್ವರ್‌ ಹೇಳಿಕೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಖಂಡನೆ

ಸಿಪಿವೈ ಕ್ಯಾಬಿನೆಟ್‌ ಬಿಟ್ಟು ಆಚೆ ಹೋಗಲಿ

184

Get real time updates directly on you device, subscribe now.

ತುಮಕೂರು: ಬಿಜೆಪಿ ಚಿನ್ಹೆ ಎಷ್ಟು ಮುಖ್ಯನೋ, ಬಿ.ಎಸ್‌.ಯಡಿಯೂರಪ್ಪ ಅವರ ನಾಯಕತ್ವ ಅಷ್ಟೇ ಮುಖ್ಯ, ನಾನು ಗೆಲ್ಲಲು ಬಿ.ಎಸ್‌.ಯಡಿಯೂರಪ್ಪ ಅವರ ನಾಯಕತ್ವದಿಂದಲೇ ಎಂದು ನಾನು ಧೈರ್ಯವಾಗಿ ಹೇಳಿಕೊಳ್ಳುತ್ತೇನೆ. ಕೋವಿಡ್‌ ಸೋಂಕು ಹರಡಿರುವ ಇಂತಹ ಸಂದರ್ಭದಲ್ಲಿ ಜನರ ಪರವಾಗಿ ನಿಂತು ಅವರ ಕಷ್ಟ, ಸಮಸ್ಯೆ ಹಾಗೂ ನೋವುಗಳಿಗೆ ಸ್ಪಂದಿಸುವುದು ಮುಖ್ಯ. ಇದನ್ನ ಬಿಟ್ಟು ಅನಾವಶ್ಯಕವಾದ ಇಂತಹ ಹೇಳಿಕೆ ನೀಡುವುದು ಸಚಿವ ಸಿ.ಪಿ.ಯೋಗೀಶ್ವರ್‌ ಅವರಿಗೆ ಗೌರವ ತರುವಂತಹ ವಿಷಯ ಅಲ್ಲ, ನಮ್ಮ ರಾಜ್ಯದಲ್ಲಿ ಬಿಜೆಪಿಗೆ ಶಕ್ತಿ, ಬಲ ತುಂಬಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮಾತ್ರ ಸಾಧ್ಯ, ಮುಖ್ಯಮಂತ್ರಿಗಳ ಮೇಲೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವ ಸಚಿವ ಯೋಗೀಶ್ವರ್‌ ಅವರು ಕ್ಯಾಬಿನೆಟ್‌ ಬಿಟ್ಟು ಆಚೆ ಹೋಗಲಿ, ಬಿ.ಎಸ್‌.ಯಡಿಯೂರಪ್ಪ ಅವರ ನಾಯಕತ್ವ ಸರಿಯಿಲ್ಲ ಎಂದಾದರೆ ಕ್ಯಾಬಿನೆಟ್‌ ಬಿಟ್ಟು ಆಚೆ ಹೋಗಲಿ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅವರು ಸಚಿವ ಸಿ.ಪಿ.ಯೋಗೀಶ್ವರ್‌ ಅವರಿಗೆ ಟಾಂಗ್‌ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯೋಗೀಶ್ವರ್‌ ಅವರು ಒಬ್ಬ ಸಚಿವರಾಗಿ ಬೇರೆಯವರಿಗೆ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದು, ನಾನು ಬಿಜೆಪಿ ಚಿನ್ಹೆಯಿಂದ ಗೆದ್ದು ಬಂದಿದ್ದೇನೆ. 2009 ರಿಂದಲೂ ಬಿ.ಎಸ್‌.ಯಡಿಯೂರಪ್ಪ ಅವರ ಜೊತೆಗಿದ್ದೇವೆ, ಅವರ ಶಕ್ತಿ ಏನೆಂಬುದು ನಮಗೆ ತಿಳಿದಿದೆ. ಬಿಜೆಪಿ 100 ಕ್ಕೂ ಹೆಚ್ಚು ಸ್ಥಾನ ಗಳಿಸಲು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ತಿಳಿದಿದೆ. ಅಂತಹುದರಲ್ಲಿ ಯಡಿಯೂರಪ್ಪ ಅವರು ರಾಜ್ಯದಲ್ಲಿ 105 ಸ್ಥಾನಗಳನ್ನು ಗೆದ್ದಿದ್ದು ದಾಖಲೆ, ಯಡಿಯೂರಪ್ಪ ಅವರು ರೈಲ್ವೆ ಬೋಗಿಗಳಿಗೆ ಮುಖ್ಯ ಇಂಜಿನ್‌ ಇದ್ದಂತೆ, ದೇಶದಲ್ಲಿ ನರೇಂದ್ರ ಮೋದಿಯವರು ಯಾವ ರೀತಿ ಮುಖ್ಯ ಇಂಜಿನ್‌ ಆಗಿದ್ದಾರೋ ಅದೇ ರೀತಿ ರಾಜ್ಯದಲ್ಲೂ ಯಡಿಯೂರಪ್ಪ ಅವರು ಮುಖ್ಯ ಇಂಜಿನ್ ನಂತೆ ಕೆಲಸ ಮಾಡಿ 100 ಸ್ಥಾನಗಳ ಗಡಿ ದಾಟಿಸಿರುವುದು ಹೆಮ್ಮೆ, ಸಚಿವ ಯೋಗೀಶ್ವರ್‌ ಅವರು ಬಿಎಸ್‌ವೈ ನಾಯಕತ್ವದ ಬಗ್ಗೆ ಮಾತನಾಡುವ ಬದಲು ಕ್ಯಾಬಿನೆಟ್ ನಿಂದ ಆಚೆ ಹೋಗುವುದೇ ಒಳ್ಳೆಯದು ಎಂದು ಹೇಳಿದರು.

Get real time updates directly on you device, subscribe now.

Comments are closed.

error: Content is protected !!