ಬಾವಿಗೆ ಹಾರಿ ಗೃಹಿಣಿ ಆತ್ಮಹತ್ಯೆ

850

Get real time updates directly on you device, subscribe now.

ತುರುವೇಕೆರೆ: ಪತಿ, ಅತ್ತೆ ಹಾಗೂ ಮಾವನ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದಬ್ಬೆಘಟ್ಟ ಹೋಬಳಿ ಗೂರಲಮಠದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ದುರ್ದೈವಿ ಶ್ವೇತಾ(30), ಚಿತ್ರದುರ್ಗ ಜಿಲ್ಲೆಯ ಶ್ರೀರಾಮಪುರ ಗ್ರಾಮದ ವಾಸಿ ಹನುಮಂತರೆಡ್ಡಿ ಅವರ ಮಗಳಾದ ಶ್ವೇತಾ ಹಾಗೂ ತಾಲೂಕಿನ ಗೂರಲಮಠ ಗ್ರಾಮದ ಧರಣೀಶ್‌ ಪರಸ್ಪರ ಪ್ರೀತಿಸಿ ಕಳೆದ 9 ವರ್ಷಗಳ ಹಿಂದೆ ಮದುವೆಯಾಗಿದ್ದರು, ಇವರಿಗೆ 4 ವರ್ಷದ ಗಂಡು ಮಗುವಿದ್ದು ಆಗಾಗ್ಗೆ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಶ್ವೇತಾಳ ಬಂಧು ವರ್ಗದವರು ರಾಜಿ ಪಂಚಾಯಿತಿ ಮಾಡಿದ್ದರೆನ್ನಲಾಗಿದೆ.
ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಳ ಸಾವಿನ ಬಗ್ಗೆ ತಾಯಿ ಸಿದ್ದಮ್ಮ ನೀಡಿದ ದೂರಿನ ಮೇರೆಗೆ ತುರುವೇಕೆರೆ ಪೊಲೀಸರು ಪ್ರಕರಣ ದಾಖಲಿಸಿ ಕ್ರಮಕ್ಕೆ ಮುಂದಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!