ವರದಕ್ಷಿಣೆಗಾಗಿ ಒತ್ತಾಯ- ಜಗಳ ವಿಕೋಪಕ್ಕೆ ಹೋಗಿ ಕೃತ್ಯ

ಹೆಂಡತಿಯನ್ನು ಕೊಂದು ಗಂಡ ಪರಾರಿ

215

Get real time updates directly on you device, subscribe now.

ತುಮಕೂರು: ವರದಕ್ಷಿಣೆಗಾಗಿ ಹೆಂಡತಿಯನ್ನು ಕೊಲೆ ಮಾಡಿ ನಂತರ ನೇಣು ಹಾಕಿ ಗಂಡ ಪರಾರಿಯಾಗಿರುವ ಘಟನೆ ತುಮಕೂರಿನ ಮಹಿಳಾ ಪೊಲೀಸ್‌ ಠಾಣೆ ವ್ಯಾಪ್ತಿಯ ಸರಸ್ವತಿ ಪುರದಲ್ಲಿ ನಡೆದಿದೆ.
ಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಸರಸ್ವತಿಪುರಂ ಮುಖ್ಯರಸ್ತೆಯ ಮೊದಲನೇ ಕ್ರಾಸಿನಲ್ಲಿರುವ ಮನೆಯೊಂದರಲ್ಲಿ ದಂಪತಿ ನಾಗರಾಜು ಹಾಗೂ ಪತ್ನಿ ಐಶ್ವರ್ಯ ವಾಸವಿದ್ದರು, ವರದಕ್ಷಿಣೆ ವಿಚಾರವಾಗಿ ಬುಧವಾರ ರಾತ್ರಿ ಗಂಡ ಹೆಂಡತಿ ನಡುವೆ ಜಗಳ ನಡೆದಿದೆ ಜಗಳ ವಿಕೋಪಕ್ಕೆ ಹೋಗಿ ನಾಗರಾಜ್‌ ತನ್ನ ಹೆಂಡತಿ ಐಶ್ವರ್ಯಳನ್ನು (19) ಹೊಡೆದು ಸಾಯಿಸಿ ನಂತರ ನೇಣು ಹಾಕಿ ಮನೆಗೆ ಬೀಗ ಹಾಕಿ ಕೊಂಡು ಪರಾರಿಯಾಗಿದ್ದಾನೆ.
ವಿಷಯ ತಿಳಿದ ಕೂಡಲೇ ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂಲತಃ ಮಾಗಡಿ ತಾಲೂಕಿನ ಕಾವೇರಮ್ಮನ ಪಾಳ್ಯದವನಾಗಿದ್ದ ನಾಗರಾಜ್‌ ತುಮಕೂರು ತಾಲ್ಲೂಕಿನ ಹೊನ್ನುಡಿಕೆ ಹ್ಯಾಂಡ್‌ ಪೋಸ್ಟ್ ಬಳಿ ಇರುವ ಪೆಟೋಲ್‌ ಬಂಕ್ ನಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ, ಸರಸ್ವತಿಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ವರದಕ್ಷಿಣೆ ಸಂಬಂಧ ಮೃತಳ ಕುಟುಂಬದವರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಜಯನಗರ ಪೊಲೀಸ್‌ ಠಾಣೆಯಿಂದ ಮಹಿಳಾ ಪೊಲೀಸ್‌ ಠಾಣೆಗೆ ಪ್ರಕರಣ ವರ್ಗಾವಣೆ ಆಗಿದ್ದು, ಇನ್ಸ್ಪೆಕ್ಟರ್‌ ರಾಧಾಕೃಷ್ಣ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!