ಹುಂಡಿ ಹಣ, ಗೃಹಿಣಿ ಸರ ಕಸಿದು ಪರಾರಿ

333

Get real time updates directly on you device, subscribe now.

ತುರುವೇಕೆರೆ: ದೇಗುಲ ಹುಂಡಿಯಲ್ಲಿದ್ದ ಹಣ ಕದ್ದ ಕಳ್ಳರು ನಿದ್ರೆಯಲ್ಲಿದ್ದ ಗೃಹಿಣಿಯ ಬಂಗಾರದ ಸರದ ತುಣುಕು ಕಸಿದು ಮನೆಯೊಂದರ ವಿಫಲ ಕಳ್ಳತನಕ್ಕೆ ಯತ್ನಿಸಿರುವ ಘಟನೆ ತಾಲೂಕಿನ ಮಾಯಸಂದ್ರ ಹೋಬಳಿ ಮಲ್ಲೂರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಗ್ರಾಮದ ಅಧಿದೈವ ರಂಗನಾಥಸ್ವಾಮಿ ದೇಗುಲದ ಬಾಗಿಲು ಮುರಿದ ಕಳ್ಳರು ಹುಂಡಿಯಲ್ಲಿದ್ದ ಹಣ ಹೊತ್ತೊಯ್ದು ಹುಂಡಿಯನ್ನು ದೇಗುಲದ ಅನತಿ ದೂರದ ಹೊಲದಲ್ಲಿ ಬಿಸಾಡಿದ್ದಾರೆ. ಮತ್ತೆ ಇದೇ ಗ್ರಾಮದ ಮನೆಯೊಂದಕ್ಕೆ ಪ್ರವೇಶಿಸಿದ ಕಳ್ಳರು ನಿದ್ರೆಯಲ್ಲಿದ್ದ ಗೃಹಿಣಿ ಉಷಾ ಎಂಬುವರ ಬಂಗಾರದ ಸರ ಕಸಿಯಲು ಮುಂದಾಗಿದ್ದಾರೆ. ಈ ವೇಳೆ ಎಚ್ಚರಗೊಂಡ ಉಷಾ ಚೀರಾಟ ನಡೆಸಿದಾಗ ಸರ ಕಿತ್ತುಹೋದ ಪರಿಣಾಮ ಸರದ ಮತ್ತೊಂದು ತುದಿ ಕಳ್ಳರ ಪಾಲಾಗಿದೆ. ಘಟನೆ ಕುರಿತಂತೆ ಹೆಸರು ಹೇಳಲಿಚ್ಚಿಸದ ಗ್ರಾಮಸ್ಥರೊಬ್ಬರು ನಿತ್ಯವೂ ಎಗ್ಗಿಲ್ಲದೆ ನಡೆಯುತ್ತಿರುವ ಜೂಜಾಟ ಕಾರಣ ಎಂದು ತಿಳಿಸಿದ್ದಾರೆ, ಪೊಲೀಸರು ಜೂಜಿಗೆ ಕಡಿವಾಣ ಹಾಕುವ ಜೊತೆಗೆ ಕಳ್ಳರನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಾಯಸಂದ್ರ ಉಪ ಠಾಣೆಯ ದಫೆದಾರ್‌ ಉಮೇಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!