ಮಾರಕಾಸ್ತ್ರಗಳಿಂದ ಮಾಜಿ ಸೈನಿಕನ ಮೇಲೆ ಹಲ್ಲೆ

322

Get real time updates directly on you device, subscribe now.

ಕುಣಿಗಲ್‌: ಜಮೀನು ವಿವಾದದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಮಾಜಿ ಸೈನಿಕನ ಮೇಲೆ ಹಲ್ಲೆ ನಡಿಸಿರುವ ಪ್ರಕರಣಕ್ಕೆ ಕುಣಿಗಲ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಟ್ಟಣದ ಎರಡನೇ ವಾರ್ಡ್ ನ ಜನತಾ ಕಾಲೋನಿಯಲ್ಲಿ ವಾಸವಾಗಿರುವ ಜಯರಾಮ ಎಂಬುವರಿಗೆ ಹುತ್ರಿದುರ್ಗ ಹೋಬಳಿಯ ಅಲ್ಕೆರೆ ಗ್ರಾಮದಲ್ಲಿ ಜಮಿನಿದ್ದು, ಸದರಿ ಜಮೀನಿನಲ್ಲಿ ಬುಧವಾರ ಸಂಜೆ ಜಯರಾಮ್‌ ಇವರ ಸೋದರ ನಿವೃತ್ತ ಸೈನಿಕ ನಂಜುಂಡ ಸ್ವಾಮಿ ಕೃಷಿಯಲ್ಲಿ ತೊಡಗಿರುವಾಗ ಅಲ್ಕೆರೆ ಗ್ರಾಮದ ಶಿವಣ್ಣ ಇವರ ಮಕ್ಕಳು ಸಂಬಂಧಿಕರು ಏಕಾಏಕಿ ಅತಿಕ್ರಮಿಸಿ, ನಂಬರ್‌ ಇಲ್ಲದ ಟ್ರಾಕ್ಟರ್‌ ಒಂದನ್ನು ತಂದು ಉಳುಮೆ ಮಾಡಲು ಮುಂದಾದರು. ಇದನ್ನು ಪ್ರಶ್ನಿಸಿದಾಗ ಏಕಾಏಕಿ ಶಿವಣ್ಣನವರ ಕಡೆಯವರು ಮಚ್ಚು, ದೊಣ್ಣೆಯಿಂದ ಹಲ್ಲೆ ಮಾಡಿದ ಪರಿಣಾಮ ಮಾಜಿ ಸೈನಿಕ ನಂಜುಂಡಸ್ವಾಮಿ ಗಾಯಗೊಂಡರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಇನ್ನೊಮ್ಮೆ ಜಮೀನಿಗೆ ಬಂದರೆ ಕೊಲೆ ಮಾಡುವುದಾಗಿ ಮಚ್ಚು ತೋರಿಸಿ ಬೆದರಿಸಿದರೆಂದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಜಯರಾಮ ನೀಡಿದ ದೂರಿನ ಮೇರೆಗೆ ಕುಣಿಗಲ್‌ ಪೊಲೀಸರು ಶಿವಣ್ಣ ಹಾಗೂ ಆತನ ಮಕ್ಕಳು, ಸಂಬಂಧಿಕರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!