ಎಟಿಎಂ ಹಣ ಕದಿಯಲು ವಿಫಲ ಯತ್ನ

258

Get real time updates directly on you device, subscribe now.

ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಬಸ್ ನಿಲ್ದಾಣದ ಅಂಗಡಿ ಮಳಿಗೆಯೊಂದರಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಇಂಡಿಯಾ ಎಟಿಎಂ ತರೆಯಲಾಗಿತ್ತು, ಜೂನ್ 08 ರ ರಾತ್ರಿ ಎಟಿಎಂ ಬಾಗಿಲು ಒಡೆದು ಹಣ ದೋಚಲು ಕಳ್ಳರು ಸೇಫ್ಟಿ ಲಾಕರ್ ಓಪನ್ ಮಾಡಲಾಗದೆ ವಿಫಲರಾಗಿದ್ದಾರೆ.
ಈ ಬಗ್ಗೆ ಎಟಿಎಂನ ಜವಾಬ್ದಾರಿ ಹೊತ್ತಿರುವ ತುಮಕೂರಿನ ಮಂಜುನಾಥ್ ಹಣ ಕಳುವಾಗಿಲ್ಲ, ಘಟನೆ ಬಗ್ಗೆ ಮುಂಬೈನಲ್ಲಿರುವ ಇಂಡಿಯಾ ಎಟಿಎಂ ಪ್ರಮುಖ ಶಾಖೆಗೆ ಮಾಹಿತಿ ನೀಡುವುದಾಗಿ ತಿಳಿಸಿದರು. ಸಿಸಿ ಕ್ಯಾಮೆರಾ ಅಳವಡಿಸಲಾಗಿದೆಯಾದರೂ ಸೈರನ್ ಅಳವಡಿಸಿಲ್ಲ ಮತ್ತು ಸೆಕ್ಯೂರಿಟಿಯನ್ನು ನೇಮಿಸಿಲ್ಲವೆಂದು ಗ್ರಾಹಕರು ದೂರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!