ಗ್ರಾಪಂ ಪಿಡಿಓ, ಸದಸ್ಯ ಎಸಿಬಿ ಬಲೆಗೆ

674

Get real time updates directly on you device, subscribe now.

ಕೊರಟಗೆರೆ: ಎಸ್ ಸಿ, ಎಸ್ ಟಿ ಅನುದಾನ ದುರುಪಯೋಗ ತನಿಖೆಗಾಗಿ ತುಮಕೂರು ಜಿಪಂ ಸಿಇಓಗೆ ನೀಡಿರುವ ಅರ್ಜಿಯನ್ನು ಹಿಂದಕ್ಕೆ ಪಡೆಯಲು ಅರ್ಜಿದಾರನಿಗೆ 25 ಸಾವಿರ ಲಂಚ ನೀಡುವ ವೇಳೆ ಗ್ರಾಪಂ ಪಿಡಿಓ ಮತ್ತು ಸದಸ್ಯನ ಮೇಲೆ ತುಮಕೂರು ಭ್ರಷ್ಟಚಾರ ನಿಗ್ರಹ ಇಲಾಖೆ ಅಧಿಕಾರಿಗಳ ತಂಡ ದಿಡೀರ್‌ ದಾಳಿ ನಡೆಸಿ ಹಣದ ಸಮೇತ ಇಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿ ಅಗ್ರಹಾರ ಗ್ರಾಪಂ ಪಿಡಿಓ ಮಂಜಮ್ಮ ಮತ್ತು ಸದಸ್ಯ ಪ್ರಭಾಕರ ಅಜ್ಜಿಹಳ್ಳಿ ಗೇಟಿನ ಬಳಿಯಲ್ಲಿ ಅರ್ಜಿದಾರ ಜೆಟ್ಟಿಅಗ್ರಹಾರ ನಾಗರಾಜುಗೆ 25 ಸಾವಿರ ಹಣ ನೀಡುವಾಗ ತುಮಕೂರು ಎಸಿಬಿ ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ ಮತ್ತು ಇನ್ಸ್ಪೆಕ್ಟರ್‌ ವಿಜಯಲಕ್ಷ್ಮೀ, ವಿರೇಂದ್ರ ನೇತೃತ್ವದ ಅಧಿಕಾರಿಗಳ ತಂಡ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಜೆಟ್ಟಿಅಗ್ರಹಾರ ಗ್ರಾಮದ ಸಾಮಾಜಿಕ ಕಾರ್ಯಕರ್ತ ನಾಗರಾಜು ಮಾತನಾಡಿ, ಅಗ್ರಹಾರ ಗ್ರಾಪಂ ನಲ್ಲಿ 14ನೇ ಹಣಕಾಸಿನ ಎಸ್ ಸಿ, ಎಸ್ ಟಿ ಅನುದಾನ ದುರುಪಯೋಗ ಆಗಿರುವ ಬಗ್ಗೆ ತುಮಕೂರು ಜಿಪಂ ಸಿಇಓಗೆ ದೂರು ನೀಡಿದ್ದೇನೆ. ಜಿಪಂ ಸಿಇಓ ತನಿಖೆ ನಡೆಸಲು ಸಿಓಗೆ ಆದೇಶ ಮಾಡಿದ್ದಾರೆ. ಅಧಿಕಾರಿಗಳು ಬರುವ ಮುನ್ನವೇ ನಾನು ನೀಡಿರುವ ದೂರಿನ ಅರ್ಜಿಯನ್ನು ಹಿಂದಕ್ಕೆ ಪಡೆಯಲು ಗ್ರಾಪಂ ಪಿಡಿಓ ಮತ್ತು ಸದಸ್ಯ 25 ಸಾವಿರ ಲಂಚದ ಆಮೀಷ ಮಾಡಿದ್ದಾರೆ. ಹಣ ನೀಡುವ ವೇಳೆ ಎಸಿಬಿ ಅಧಿಕಾರಿಗಳಿಗೆ ಹಿಡಿಸಿದ್ದೇನೆ ಎಂದು ಹೇಳಿದರು.
ತುಮಕೂರು ಎಸಿಬಿ ಡಿವೈಎಸ್ಪಿ ಮಲ್ಲಿಕಾರ್ಜುನ್‌ ಚುಕ್ಕಿ ಮಾತನಾಡಿ ಜೆಟ್ಟಿಅಗ್ರಹಾರ ಗ್ರಾಮದ ನಾಗರಾಜು ಲಂಚದ ಆಮಿಷ ಮಾಡುತ್ತಿರುವ ಗ್ರಾಪಂ ಪಿಡಿಓ ಮತ್ತು ಸದಸ್ಯನ ವಿರುದ್ಧ ಎಸಿಬಿ ಕಚೇರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಎಸಿಬಿ ಅಧಿಕಾರಿಗಳ ತಂಡ ಅಜ್ಜಿಹಳ್ಳಿ ಗೇಟ್‌ ಬಳಿ ದಾಳಿ ನಡೆಸಿದೆ. ಅಗ್ರಹಾರ ಗ್ರಾಪಂ ಪಿಡಿಓ ಮಂಜಮ್ಮ ಮತ್ತು ಸದಸ್ಯ ಪ್ರಭಾಕರ ಲಂಚದ ಆಮಿಷವಾಗಿ 25 ಸಾವಿರ ನಾಗರಾಜುಗೆ ನೀಡುವ ವೇಳೆ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!