ಬಿಜೆಪಿ ಎಂಬ ವೈರಸನ್ನು ದೇಶದಿಂದ ಓಡಿಸಿ: ಕೆ ಎನ್ ಆರ್

542

Get real time updates directly on you device, subscribe now.

ಮಧುಗಿರಿ: ದೇಶವನ್ನು ಆವರಿಸಿರುವ ಬಿಜೆಪಿ ಎಂಬ ವೈರಸನ್ನು ಈ ದೇಶದಿಂದ ಓಡಿಸಲು ಯುವ ಶಕ್ತಿ ಸಂಘಟಿತರಾಗಬೇಕಿದೆ ಎಂದು ಮಾಜಿ ಶಾಸಕ ಕೆ.ಎನ್‌.ರಾಜಣ್ಣ ತಿಳಿಸಿದರು.
ಪಟ್ಟಣದ ಟಿವಿವಿ ಪೆಟೋಲ್‌ ಬಂಕ್‌ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಅಭಿಮಾನಿಗಳ ಬಳಗ ಹಾಗೂ ತಾಲೂಕು ಕಾಂಗ್ರೆಸ್‌ ಸಮಿತಿಯಿಂದ ಹಮ್ಮಿಕೊಂಡಿದ್ದ ಬೆಲೆ ಏರಿಕೆ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಜೀವನ ನಡೆಸುವುದು ದುಸ್ಥರವಾಗಿದೆ, ಕೇಂದ್ರ ಸರಕಾರ ಪೆಟೋಲ್‌, ಡೀಸೆಲ್‌ ತೆರಿಗೆ ಕಡಿಮೆ ಮಾಡಿ ಬೆಲೆ ಇಳಿಸಬೇಕು, ಇಲ್ಲದ್ದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಕೇಂದ್ರ ಸರಕಾರ ರೈತರ ಬೇಡಿಕೆ ಈಡೇರಿಸಿಲ್ಲ, ಅವರ ಬಗ್ಗೆ ಪ್ರಧಾನಿ ಸಹಾನುಭೂತಿ ತೋರಿಸಿಲ್ಲ, ರೈತರು ಬೆಳೆದ ಬೆಳೆಗೆ ದರ ಸಿಗುತ್ತಿಲ್ಲ ಎಂದ ಅವರು ದೇಶದ ಜನತೆ ನೆಮ್ಮದಿಯಿಂದ ಜೀವನ ನಡೆಸಲು ಕಾಂಗ್ರೆಸ್‌ ಸರಕಾರವನ್ನು ಅಧಿಕಾರಕ್ಕೆ ತರಬೇಕು ಎಂದರು.
ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ನಾಗೇಶ್‌ ಬಾಬು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಎಸ್‌.ಮಲ್ಲಿಕಾರ್ಜುನಯ್ಯ, ಎಸ್‌.ಆರ್‌.ರಾಜಗೋಪಾಲ್‌, ಗ್ರಾಪಂ ಅಧ್ಯಕ್ಷ ಸಿದ್ದಾಪುರ ವೀರಣ್ಣ, ಪುರಸಭಾ ಸದಸ್ಯರಾದ ಲಾಲಾಪೇಟೆ ಮಂಜುನಾಥ್, ಎಂ.ವಿ.ಮಂಜುನಾಥ್‌ ಆಚಾರ್‌, ಮುಖಂಡರಾದ ಎಂ.ಎಸ್‌.ಶಂಕರ ನಾರಾಯಣ್‌, ವಿ.ಆರ್‌.ಭಾಸ್ಕರ್‌, ಶಿವಕುಮಾರ್‌, ಆನಂದ್‌ ಕೃಷ್ಣ, ಪಿ.ಸಿ.ಕೃಷ್ಣ ರೆಡ್ಡಿ, ಯುವ ಕಾಂಗ್ರೆಸ್‌ ತಾಲ್ಲೂಕು ಅಧ್ಯಕ್ಷ ಎಸ್‌.ಕೆ.ವೆಂಕಟೇಶ್‌, ಕಾರ್ಯಾಧ್ಯಕ್ಷ ಬಿ.ಎನ್‌.ನಾಗಾರ್ಜುನ ಹಾಜರಿದ್ದರು. ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲೂ ಕಾಂಗ್ರೆಸ್‌ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Get real time updates directly on you device, subscribe now.

Comments are closed.

error: Content is protected !!