ಹೆಲ್ಮೆಟ್‌ ಧರಿಸಿ ಜೀವ ರಕ್ಷಿಸಿಕೊಳ್ಳಿ : ಪಿ ಎಸ್ ಐ ಹರೀಶ್

454

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ದ್ವಿಚಕ್ರ ವಾಹನ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು, ಅಪಘಾತವಾದ ಸಂದರ್ಭದಲ್ಲಿ ಹೆಲ್ಮೆಟ್‌ ಜೀವ ರಕ್ಷಿಸುತ್ತದೆ. ಉದಾಸೀನದಿಂದ ಹೆಲ್ಮೆಟ್‌ ಧರಿಸದೆ ವಾಹನ ಓಡಿಸಿದರೆ ನಿಮ್ಮ ಕುಟುಂಬಕ್ಕೆ ನೀವೆ ಮಾಡುವ ಮೋಸ ಎಂದು ಪಿ ಎಸ್ ಐ ಹರೀಶ್‌ ತಿಳಿಸಿದರು.
ಪಟ್ಟಣದಲ್ಲಿ ಶಿವ ಎಲೆಕ್ಟ್ರಾನಿಕ್ ನ ಚಂದ್ರಶೇಖರ್‌ (55) ಎಂಬುವ ವ್ಯಕ್ತಿ ಬೈಕ್‌ ಅಪಘಾತದಿಂದ ಸಾವನಪ್ಪಿದ್ದು, ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಅವರು ಪತ್ರಿಕೆ ಜೊತೆ ಮಾತನಾಡಿ, ಚಂದ್ರಶೇಖರ್‌ ಎಂಬ ವ್ಯಕ್ತಿ ಅಪಘಾತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದು ಸಾವನಪ್ಪಿದ್ದು, ಒಂದು ವೇಳೆ ಹೆಲ್ಮೆಟ್‌ ಧರಿಸಿದಿದ್ದರೆ ಈ ವ್ಯಕ್ತಿ ಬದುಕುತ್ತಿದ್ದ, ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಕುಟುಂಬದವರು ನಾವು ಮನೆಗೆ ಹಿಂತಿರುಗುವ ನಿರೀಕ್ಷೆಯಲ್ಲಿರುತ್ತಾರೆ. ರಸ್ತೆ ನಿಯಮ ಪಾಲನೆ ಮಾಡದೆ ಅಪಘಾತಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡರೆ ಕುಟುಂಬದವರಿಗೆ ಆಸರೆ ಯಾರು ಆಗುತ್ತಾರೆ. ವಾಹನ ಚಲಾಯಿಸುವಾಗ ಜಾಗೃತಿಯಿಂದ ಇರಬೇಕು, ಎಲ್ಲರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ, ರಸ್ತೆ ನಿಯಮ ಪಾಲನೆ ಮಾಡಿ, ಒಂದು ವೇಳೆ ಪಾಲನೆ ಮಾಡದಿದ್ದರೆ ಕಾನೂಕು ಕ್ರಮ ಜರುಗಿಸಬೇಕಾಗುತ್ತದೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!