ಹೆಚ್ ಎ ಎಲ್ ನಲ್ಲಿ ಸ್ಥಳೀಯರಿಗೆ ಕೆಲಸ ನೀಡಲು ಆಗ್ರಹ

581

Get real time updates directly on you device, subscribe now.

ನಿಟ್ಟೂರು: ಎಚ್ ಎ ಎಲ್‌ ಕೈಗಾರಿಕೆ ನಮ್ಮ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಈ ಭಾಗಕ್ಕೆ ಮೂಲಭೂತ ಸೌಲಭ್ಯ ಒದಗಿಸಿಕೊಡಬೇಕು ಎಂದು ಛಲವಾದಿ ಮಹಾಸಭಾದ ಮುಖಂಡ ಕುಂದರನಹಳ್ಳಿ ರವೀಶ್‌ ಮನವಿ ಮಾಡಿದರು.
ಗುಬ್ಬಿ ತಾಲೂಕಿನ ಕುಂದರನಹಳ್ಳಿ ಗೇಟ್ ನಲ್ಲಿ ಶಾಸಕ ಎಸ್‌.ಆರ್‌.ಶ್ರಿನಿವಾಸ್‌ ಅವರಿಗೆ ಈ ಭಾಗದಲ್ಲಿ ರಸ್ತೆ ಕಾಮಾಗಾರಿಗೆ ಆದ್ಯತೆ ನೀಡಿ ಅಭಿವೃದ್ಧಿ ಕೆಲಸ ಮಾಡುತ್ತಿರುವುದಕ್ಕೆ ಅಭಿನಂದಿಸಿ ಮಾತನಾಡಿ, ನಮ್ಮ ಭಾಗದಲ್ಲಿ ಸಾಕಷ್ಟು ಇನ್ನೂ ಕೆಲಸ ಕಾರ್ಯ ನಡೆಯಬೇಕಾಗಿದೆ ಹಾಗೂ ಸಾಕಷ್ಟು ಜನರಿಗೆ ಮನೆ ನಿವೇಶನದ ಅಗತ್ಯವಿದ್ದು ಅದನ್ನು ತಾವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಶಾಸಕ ಎಸ.ಆರ್‌.ಶ್ರಿನಿವಾಸ್‌ ಮಾತನಾಡಿ ಈಗಾಗಲೆ 50 ಲಕ್ಷ ಹಣದಲ್ಲಿ ಸಿಸಿ ರಸ್ತೆ ಕಾಮಾಗಾರಿಗೆ ಹಣ ಹಾಕಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಅನುದಾನ ಬರುತ್ತಿರುವುದು ವಿಳಂಬವಾಗಿತ್ತು, ಇನ್ನೂ ಮುಂದೆ ಹೆಚ್ಚಿನ ಅನುದಾನ ತಂದು ಇಲ್ಲಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯ ನೀಡಲಾಗುತ್ತದೆ ಮತ್ತು ತಾಲೂಕಿನ ಹಲವು ಭಾಗದಲ್ಲಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದ್ದು, ತಾಲೂಕಿನ ಬಹುತೇಕ ರಸ್ತೆಗಳು ಸಿಸಿ ರಸ್ತೆಗಳಾಗಿ ಈ ವರ್ಷದಲ್ಲಿ ಮುಗಿಯುತ್ತದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ದರಾಮೇಗೌಡ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಸಿದ್ದಲಿಂಗಯ್ಯ, ಮುಖಂಡರಾದ ದೊಡ್ಡನರಸಯ್ಯ, ಶಿವಣ್ನ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!