ಕುಣಿಗಲ್: ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಉಜ್ಜಿನಿ ಗ್ರಾಮದಲ್ಲಿನ ಪಶುವೈದ್ಯ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ಗುರುವಾರ ಗ್ರಾಮಸ್ಥರು, ಜಾನುವಾರ ಮಾಲೀಕರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು.
ರಾಸುಗಳು ಆರೋಗ್ಯ ತಪಾಸಣೆಗೆ ಆಗಮಿಸಿದ ಜಾನುವಾರು ಮಾಲೀಕರಿಗೆ ವೈದ್ಯರು ಸೇರಿದಂತೆ ಆಸ್ಪತ್ರೆ ಸಿಬ್ಬಂದಿಯ ಆಗಮನಕ್ಕೆ ಕಾದು ಬೇಸತ್ತರು, ಸ್ಥಳಕ್ಕೆ ಆಗಮಿಸಿದ ಗ್ರಾಮದ ಮುಖಂಡ ಚನ್ನೇಗೌಡ ನೇತೃತ್ವದಲ್ಲಿ ಅಸಮರ್ಪಕ ವ್ಯವಸ್ಥೆ ಖಂಡಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜಾನುವಾರು ಮಾಲೀಕರು, ಗ್ರಾಮದಲ್ಲಿ ಕಳೆದ ಸೋಮವಾರದಿಂದ ವಿವಿಧ ಕಾರಣಗಳಿಂದ ಮೂರು ರಾಸು ಮೃತಪಟ್ಟಿವೆ, ಕೆಲವು ಅನಾರೋಗ್ಯಕ್ಕೆ ತುತ್ತಾಗಿವೆ, ಆಸ್ಪತ್ರೆ ಇದೆ, ಆದರೆ ವೈದ್ಯರು ಸರಿಯಾಗಿ ಬರುವುದಿಲ್ಲ, ಯಾರಿಗೆ ಕೇಳಿದರೂ ಸ್ಪಷ್ಟವಾಗಿ ಉತ್ತರ ಸಿಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರು, ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದ ಮೇರೆಗೆ ಆಸ್ಪತ್ರೆಗೆ ತುರ್ತಾಗಿ ಸಮೀಪದ ನಿಡಸಾಲೆ ವೈದ್ಯರ ನಿಯೋಜಿಸಿ ಸಮಸ್ಯೆ ಬಗಹರಿಸುವುದಾಗಿ ಅಧಿಕಾರಿಗಳು ಭರವಸೆ ಕೊಟ್ಟ ಮೇರೆಗೆ ಪ್ರತಿಭಟನೆ ಕೈಬಿಟ್ಟರು.
ಪಶು ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
Get real time updates directly on you device, subscribe now.
Prev Post
Next Post
Comments are closed.