ಕಾರಿನ ಗಾಜು ಹೊಡೆಯುತ್ತಿದ್ದ ದುಷ್ಕರ್ಮಿ ಅರೆಸ್ಟ್

222

Get real time updates directly on you device, subscribe now.

ತುಮಕೂರು: ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಕಲ್ಲು ತೂರಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದ ಆರೋಪಿ ಈಗ ಅಂದರ್ ಆಗಿದ್ದಾನೆ.
ಶ್ರೀರಾಮನಗರದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ 15 ಕ್ಕೂ ಹೆಚ್ಚು ವಾಹನಗಳ ಗಾಜನ್ನು ಪುಡಿ ಪುಡಿ ಮಾಡಿ ಕಾರಿನಲ್ಲಿದ್ದ ವಸ್ತುಗಳನ್ನು ಕದ್ದೊಯ್ಯಲಾಗಿತ್ತು, ಇದರಿಂದ ಮನೆ ಮುಂದೆ ಕಾರುಗಳನ್ನು ನಿಲ್ಲಿಸುವ ಮಾಲೀಕರು ಕಂಗಾಲಾಗಿದ್ದರು, ಅಲ್ಲದೆ ಮನೆಯ ಮುಂದೆ ನಿಲ್ಲಿಸುವ ಕಾರಿನ ಚಾಲಕರು ಹಾಗೂ ಮಾಲೀಕರು ಈ ಘಟನೆಯಿಂದ ಬೆಚ್ಚಿಬಿದ್ದಿದ್ದರು.
ವಿಷಯ ತಿಳಿದ ಕೂಡಲೇ ಎಚ್ಚೆತ್ತುಕೊಂಡ ಪೊಲೀಸ್ ಸಿಬ್ಬಂದಿ ದುಷ್ಕರ್ಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಪತ್ತೆ ಮಾಡಲು ತುಮಕೂರು ನಗರ ಪೊಲೀಸ್ ಠಾಣಾ ಪಿಎಸ್ಐ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡ ಆರೋಪಿ ಸುದೀಪ್(21) ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತ ಎಳನೀರು ವ್ಯಾಪಾರಿಯಾಗಿದ್ದು, ಎನ್.ಆರ್.ಕಾಲೋನಿಯ 6 ನೇ ಕ್ರಾಸ್ನಲ್ಲಿ ಈತನನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಿದಾಗ ಈತನೇ ಕಾರುಗಳ ಗಾಜು ಪುಡಿ ಮಾಡುತ್ತಿದ್ದುದು ತಿಳಿದಿದೆ. ಈ ಹಿಂದೆಯೂ ಈತ ಆಟೋ ಕಳವು ಪ್ರಕರಣ, ಮನೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ 04 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ, ಲಾಕ್ಡೌನ್ ಕಾರಣದಿಂದ ಯಾವುದೇ ಕೆಲಸ ಮಾಡದೇ ವಾಹನಗಳ ಡ್ಯಾಶ್ ಬೋರ್ಡ್ನಲ್ಲಿ ಹಣ, ಮೊಬೈಲ್ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ಇಟ್ಟಿರುತ್ತಾರೆಂದು ಅವುಗಳನ್ನು ಕಳ್ಳತನ ಮಾಡುವ ಉದ್ದೇಶದಿಂದ ಕಾರ್ ಗ್ಲಾಸ್ ಹೊಡೆದು ಹಾಕುತ್ತಿದ್ದ.

Get real time updates directly on you device, subscribe now.

Comments are closed.

error: Content is protected !!