ಜಮೀರ್‌ ಸ್ವಾರ್ಥಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರ್ತಾರೆ

193

Get real time updates directly on you device, subscribe now.

ಕುಣಿಗಲ್‌: ಶಾಸಕರ ಜಮೀರ್‌ ಅಹಮದ್ ಖಾನ್‌ ತಮ್ಮ ಸ್ವಾರ್ಥಕ್ಕೆ ಪಕ್ಷದಿಂದ ಪಕ್ಷಕ್ಕೆ ಹಾರುವ ಮನೋಭಾವ ಹೊಂದಿದ್ದು, ತಾವಿರುವ ಪಕ್ಷದ ಮುಖಂಡ ಒಲೈಸಲು ಬಿಜೆಪಿ ಪಕ್ಷ ಟೀಕಿಸುವ ಕೆಲಸಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ, ಪಿಎಲ್‌ಡಿ ಬ್ಯಾಂಕ್‌ ರಾಜ್ಯಧ್ಯಕ್ಷ ಡಿ.ಕೃಷ್ಣಕುಮಾರ್‌ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಮೀರ್‌ ಅಹಮದ್‌ ಮೂಲತಃ ಜೆಡಿಎಸ್‌ನಲ್ಲಿದ್ದು ಅಲ್ಲಿ ದೇವೆಗೌಡರು, ಕುಮಾರಸ್ವಾಮಿಯವರ ಕೃಪೆಯಿಂದ ಅಧಿಕಾದ ರುಚಿ ಅನಭವಿಸಿದರು. ಇದೀಗ ಕಾಂಗ್ರೆಸ್‌ ಸೇರಿ ಸಿದ್ದರಾಮಯ್ಯ ಅವರನ್ನು ಓಲೈಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಕಾಂಗ್ರೆಸ್‌ ಪಕ್ಷವನ್ನು ಇಬ್ಬಾಗ ಮಾಡುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರು ಸಿಎಂ ಆದರೆ ಅವರ ಮನೆ ಮುಂದೆ ವಾಚ್‌ಮನ್ ಡ್ರೆಸ್‌ ಹಾಕಿಕೊಂಡು ವಾಚ್‌ಮನ್‌ ಕೆಲಸ ಮಾಡ್ತೇನೆ ಎಂದು ಹೇಳಿದ್ದರು. ಯಡಿಯೂರಪ್ಪ ಸಿಎಂ ಆದ ನಂತರ ಗಲಿಬಿಲಿಗೊಳ್ಳುವಂತಾದರು ಎಂದು ವ್ಯಂಗ್ಯವಾಡಿದರು.
ಜಮೀರ್‌ ಅಹಮದ್‌ ಸ್ವಂತ ವರ್ಛಸ್ಸಿನ ಮೇಲೆ ರಾಜ್ಯಮಟ್ಟದ ನಾಯಕರಾಗಲಿ, ಅದು ಬಿಟ್ಟಿ ಮಾಜಿ ಸಿಎಂ ಕುಮಾರಸ್ವಾಮಿ ಯವರನ್ನು ಟೀಕಿಸುವ ಮೂಲಕ ಒಕ್ಕಲಿಗರ ವಿರೋಧ ಕಟ್ಟಿಕೊಂಡಿದ್ದಾರೆ. ಇದೀಗ ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ಬಿಜೆಪಿಯ ಜನಪರ ಕಾರ್ಯಕ್ರಮ ಸಹಿಸಲಾಗದೆ ಬಿಜೆಪಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಎಷ್ಟು ದಿನ ಇರುತ್ತಾರೋ ಅದೂ ಗ್ಯಾರಂಟಿ ಇಲ್ಲ, ಇನ್ನಾದರೂ ಜಮೀರ್‌ ಅವರು ತಮ್ಮ ಬಾಂಧವರು ಕೊವಿಡ್‌ನಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ವ್ಯಾಕ್ಸಿನ್‌ ಪಡೆಯುವಂತೆ ಮನವೊಲಿಸಲಿ ಎಂದರು.

Get real time updates directly on you device, subscribe now.

Comments are closed.

error: Content is protected !!