ಸ್ನೇಹಿತನನ್ನು ಕೊಲೆ ಮಾಡಿದ್ದ ಆರೋಪಿ ಸೆರೆ

358

Get real time updates directly on you device, subscribe now.

ತುರುವೇಕೆರೆ: ಪಾನಮತ್ತನಾಗಿದ್ದ ವೇಳೆ ಆಗಾಗ್ಗೆ ಬಯುತ್ತಿದ್ದ ಸ್ನೇಹಿತನನ್ನು ತಾಲೂಕಿನ ಜೋಡಿಕಟ್ಟೆ ಬಳಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಪುನೀತ ಅಲಿಯಾಸ್‌ ಪುನಿ (24) ಎಂಬುವನನ್ನು ಬಂಧಿಸುವಲ್ಲಿ ತುರುವೇಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ವಿವರ: ತಾಲೂಕಿನ ಜೋಡಿಕಟ್ಟೆ ಸಂತೆ ಮೈದಾನದಲ್ಲಿ ವಾಸವಿರುವ ಕುಮಾರ್‌ ಅಲಿಯಾಸ್‌ ರಾಜಾಬೋವಿ ಕಳೆದ ಜೂನ್‌ 20 ರಂದು ಗಾರೆ ಕೆಲಸಕ್ಕೆ ಹೋದವ ಮನೆಗೆ ವಾಪಸ್ಸಾಗಿರಲಿಲ್ಲ, ಜೋಡಿಕಟ್ಟೆ ಸಂತೆ ಮೈದಾನದಲ್ಲಿರುವ ಕಲ್ಲುಬಂಡೆಗಳ ನಡುವೆ ಜೂನ್‌ 23 ರಂದು ರಾಜಾಬೋವಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು, ಮಗನ ಸಾವಿನ ಬಗ್ಗೆ ತಾಯಿ ಗೌರಮ್ಮ ಅನುಮಾನ ವ್ಯಕ್ತಪಡಿಸಿದ್ದರು.
ಆರೋಪಿ ಪತ್ತೆಗೆ ಜಿಲ್ಲಾ ಎಸ್‌ಪಿ ರಾಹುಲ್‌ಕುಮಾರ್‌ ಶಹಾಪುರ್‌ ವಾಡ್‌, ಹೆಚ್ಚುವರಿ ಎಸ್‌ಪಿ ಉದೇಶ್‌ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ರಮೇಶ್‌ ಹಾಗೂ ಸಿಪಿಐ ನವೀನ್‌ ನೇತೃತ್ವದ ತಂಡ ರಚಿಸಿದ್ದರು. ಕೊಲೆ ಮಾಡಿ ಬೆಂಗಳೂರಿನ ಮಾಕಳಿ ಹೆಗ್ಗಡದೇವನಪುರದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿಯನ್ನು ಪೊಲೀಸ್‌ ತಾಂತ್ರಿಕ ತಂಡ ಪತ್ತೆ ಹಚ್ಚಿತ್ತು. ಅಂತಿಮವಾಗಿ ಆರೋಪಿಯನ್ನು ಬಂಧಿಸಿ ಕರೆತಂದ ಪೊಲೀಸರು ವಿಚಾರಣೆಗೊಳಪಡಿಸಿದಾಗ ಕೊಲೆಯಾದ ಕುಮಾರ್‌ ಎಂಬುವನ್ನು ನನ್ನನ್ನು ಪದೇ ಪದೆ ನಿಂದಿಸುತ್ತಿದ್ದ, ವಿನಾಕಾರಣ ಕಳ್ಳತನದ ಆರೋಪವನ್ನು ನನ್ನ ಸಂಬಂಧಿಕರ ಮೇಲೆ ಹೊರಿಸುತ್ತಿದ್ದನು, ಇದರಿಂದ ಬೇಸರಗೊಂಡು ಕೃತ್ಯವೆಸಗಿದ್ದಾಗಿ ತಿಳಿಸಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!