ಆಟೋ ನಿಲ್ದಾಣದಲ್ಲಿ ವ್ಯಕ್ತಿ ಸಾವು

451

Get real time updates directly on you device, subscribe now.

ಕುಣಿಗಲ್‌: ಲಾಕ್ ಡೌನ್‌ ನಂತರ ತಮ್ಮ ಆರಾದ್ಯ ದೇವರ ದರ್ಶನಕ್ಕೆ ಬಂದ ಭಕ್ತಾದಿಯೊಬ್ಬರು ಹೃದ್ರೋಗದಿಂದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಆಟೋ ನಿಲ್ದಾಣದಲ್ಲೆ ಮೃತಪಟ್ಟಿದ್ದಾರೆ.
ಮೃತರನ್ನು ಬೆಂಗಳೂರು ನಾಯಂಡಹಳ್ಳಿಯ ರಾಜಶೇಖರ್ (49) ಎಂದು ಗುರುತಿಸಲಾಗಿದೆ. ಇವರು ತಾಲೂಕಿನ ಸುಂದರಕುಪ್ಪೆ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಭಕ್ತರಾಗಿದ್ದರು. ಲಾಕ್ ಡೌನ್‌ ಕಾರಣ ಬಸ್‌ ಸಂಚಾರ ಇಲ್ಲದೆ, ದೇವರ ದರ್ಶನ ಇಲ್ಲದಂತಾಗಿತ್ತು. ಲಾಕ್ ಡೌನ್‌ ತೆರವುಗೊಂಡ ಕಾರಣ ಸೋಮವಾರ ತಮ್ಮ ಆರಾದ್ಯ ದೈವನ ನೋಡಲು ಕುಣಿಗಲ್ ಗೆ ಬಂದು ಇಲ್ಲಿಂದ ದೇವಾಲಯಕ್ಕೆ ತೆರಳಲು ಆಟೋ ಹತ್ತಲು ಬಂದಾಗ ದಿಡೀರ್‌ ಹೃದಯಾಘಾತವಾಗಿ ಮೃತಪಟ್ಟರು. ರಿಕ್ಷಾ ಚಾಲಕರು ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮೊಬೈಲ್‌ ಸೇರಿದಂತೆ ಇತರೆ ದಾಖಲೆ ಪರಿಶೀಲಿಸಿ ಮೃತನ ವಿಳಾಸ ಪತ್ತೆಹಚ್ಚಿ ಸಂಬಂಧಿಕರಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!