ಅಕ್ರಮವಾಗಿ ಸಾಗಿಸುತ್ತಿದ್ದ ಕರುಗಳ ರಕ್ಷಣೆ

271

Get real time updates directly on you device, subscribe now.

ಕುಣಿಗಲ್‌: ಮಂಗಳೂರು ಕಡೆಯಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ಇಪ್ಪತ್ತಕ್ಕು ಹೆಚ್ಚು ಎಳೆ ಕರುಗಳನ್ನು ತುಂಬಲಾಗಿದ್ದ ವಾಹನವನ್ನು ಹಿಂದೂ ಸೇನೆಯ ಕಾರ್ಯಕರ್ತರು ತಡರಾತ್ರಿ ಪತ್ತೆಹಚ್ಚಿ ಕುಣಿಗಲ್‌ ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳೂರು ಕಡೆಯಿಂದ ಬೆಂಗಳೂರಿಗೆ ಬೊಲೋರೋ ಸರಕು ಜೀಪಿನಲ್ಲಿ ಹಿಂದೆ ತೆಂಗಿನಕಾಯಿ ಚೀಲಗಳನ್ನು ಕಟ್ಟಿ ಮಧ್ಯೆ ಸುಮಾರು ಇಪ್ಪತ್ತಕ್ಕು ಹೆಚ್ಚು ಎಳೆಯ ಕರುಗಳನ್ನು ಅಮಾನವೀಯವಾಗಿ ತುಂಬಿ ಸಾಗಿಸುತ್ತಿದ್ದರು. ವಿಷಯ ತಿಳಿದ ಸ್ಥಳೀಯ ಹಿಂದೂ ಸೇನೆಯ ಕಾರ್ಯಕರ್ತರಾದ ಗಿರೀಶ್‌, ಮಂಜು, ರಾಮು ಇತರರು ವಾಹನ ತಡೆದು ಕುಣಿಗಲ್‌ ಪೊಲೀಸರ ವಶಕ್ಕೆ ನೀಡಿದ್ದು, ಕರುಗಳನ್ನು ಸ್ಥಳೀಯವಾಗಿ ಉಪಚರಿಸಿದ ನಂತರ ಮೈಸೂರಿನ ಗೋಶಾಲೆಗೆ ಸಾಗಿಸಿದ್ದು, ಪೊಲೀಸರು ವಾಹನದ ಮಾಲೀಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!