ನನ್ನ ಬಗ್ಗೆ ಮಾತನಾಡುವವರಿಗೆ ತಲೆ ಕೆಟ್ಟಿರಬೇಕು: ಎಸ್‌.ಆರ್‌.ಶ್ರೀನಿವಾಸ್

ಕಾಂಗ್ರೆಸ್ ಗೆ ಹೋಗ್ತೇನೆ ಅಂತಾ ಎಲ್ಲೂ ಹೇಳಿಲ್ಲ

159

Get real time updates directly on you device, subscribe now.

ಗುಬ್ಬಿ: ನಾನು ಎಲ್ಲಿಯೂ ಕಾಂಗ್ರೆಸ್ ಗೆ ಹೋಗುತ್ತೇನೆ ಎಂದು ಹೇಳಿಲ್ಲ ಯಾರೋ ಹಚ್ಚುವ ಗಾಳಿ ಸುದ್ದಿಗೆ ತಲೆ ಕೆಟ್ಟವರಂತೆ ಮಾತನಾಡುವುದನ್ನ ಬಿಡಲಿ ಎಂದು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ತಿಳಿಸಿದರು.
ಪಟ್ಟಣದ ಪಟ್ಟಣ ಪಂಚಾಯಿತಿ ಸಂಭಾಗಣದಲ್ಲಿ ನಡೆದ ಸಾಮಾನ್ಯ ಸಭೆ ಮುಗಿಸಿ ಪತ್ರಕರ್ತರ ಜೊತೆ ಮಾತನಾಡಿ, ನನ್ನ ಜೀವನದಲ್ಲಿ ಯಾವತ್ತೂ ಯಾರನ್ನು ಹೈಜಾಕ್‌ ಮಾಡಿ ರಾಜಕೀಯ ಮಾಡಿಲ್ಲ ಹಾಗೂ ಗೆಲ್ಲುವ ಅವಶ್ಯಕತೆಯು ನನಗಿಲ್ಲ, ನನ್ನ ಮುಂದೆ ಯಾರು ಸ್ಪರ್ಧೆ ಮಾಡಿದರು ಸಹ ನಾನು ಚುನಾವಣೆ ಎದುರಿಸಿ ಗೆಲುವು ಪಡೆದಿದ್ದೇನೆ, ನನ್ನ ಮತದಾರರು ಸದಾ ಕಾಲ ನನ್ನ ಕೈ ಹಿಡಿದಿದ್ದಾರೆ.
ನಾನು ಜೆಡಿಎಸ್‌ನಲ್ಲೇ ಇದ್ದೇನೆ, ಅಲ್ಲಿಂದಲೇ ನಮ್ಮ ಅಭ್ಯರ್ಥಿಗಳನ್ನು ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಕ್ಷೇತ್ರಗಳಲ್ಲಿ ಎಲ್ಲಾ ಕಡೆ ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತೇವೆ. ನನಗೆ ಚುನಾವಣೆ ಮಾಡುವುದು ಗೊತ್ತಿದೆ,
ಅವರ ಪಕ್ಷ ಅವರಿಗೆ ನಮ್ಮ ಪಕ್ಷ ನಮಗೆ, ನಮ್ಮ ಜೆಡಿಎಸ್‌ ಪಕ್ಷದ ಯಾವುದೇ ಪದಾಧಿಕಾರಿಗಳು ನಾನು ಜೆಡಿಎಸ್‌ ಬಿಡುತ್ತೇನೆ, ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದು ಹೇಳಿಕೆ ನೀಡಿಲ್ಲ ಎಂದ ಮೇಲೆ ಯಾರೋ ಮಾತನಾಡುವ ಮಾತುಗಳಿಗೆ ನಾನು ಉತ್ತರ ನೀಡುವ ಅಗತ್ಯವಿಲ್ಲ, ಇಲ್ಲಿ ಯಾವ ಗೊಂದಲವಿದೆ, ನನಗೆ ಅರ್ಥವಾಗಿಲ್ಲ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!