ಜಿಪಂಗೆ ನಮ್ಮ ಕುಟುಂಬದಿಂದ ಯಾರು ಸ್ಪರ್ಧಿಸಲ್ಲ: ಶ್ರೀನಿವಾಸ್

155

Get real time updates directly on you device, subscribe now.

ಗುಬ್ಬಿ: ಈ ಬಾರಿ ನಮ್ಮ ಕುಟುಂಬದಿಂದ ಜಿಲ್ಲಾ ಪಂಚಾಯತ್‌ ಚುನಾವಣೆಗೆ ಯಾರು ಸ್ಪರ್ಧೆ ಮಾಡುವುದಿಲ್ಲ ಎಂದು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಸ್ಪಷ್ಟ ಪಡಿಸಿದರು.
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಹರದಗೆರೆ ಗ್ರಾಮದ ಭೋವಿ ಕಾಲೋನಿ ರಸ್ತೆಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿ, ಜೆಡಿಎಸ್‌ ಪಕ್ಷದಿಂದ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಿ ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಲಾಗುತ್ತದೆ. ತಾಲೂಕಿನ ಎಲ್ಲಾ ಭಾಗದಲ್ಲಿಯೂ ನಮ್ಮ ಅಭ್ಯರ್ಥಿಗಳು ಇದ್ದಾರೆ ಸಾಕಷ್ಟು ಜನ ಆಕಾಂಕ್ಷಿಗಳು ಸಹ ಇದ್ದಾರೆ, ಮಾನದಂಡ ಅನುಸರಿಸಿ ಟಿಕೆಟ್‌ ನೀಡಲಾಗುತ್ತದೆ, ಕಳೆದ ಬಾರಿ ಮಾಡಿಕೊಂಡ ತಪ್ಪು ಮಾಡದೆ
ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ, ಸುಖ ಸುಮ್ಮನೆ ಗಾಳಿ ಸುದ್ದಿಯಲ್ಲಿ ಹರಡುತ್ತಿದೆ, ಇದರ ಬಗ್ಗೆ ನಾನು ಯಾವುದೇ ಕಾಮೆಂಟ್‌ ಮಾಡುವುದಿಲ್ಲ, ಕೋವಿಡ್‌ ಹಿನ್ನಲೆಯಲ್ಲಿ ಅನುದಾನ ಬಂದಿರಲಿಲ್ಲ, ಈಗ ನಿಧಾನವಾಗಿ ಹಣ ಬಿಡುಗಡೆಯಾಗುತ್ತಿದ್ದು, ತಾಲೂಕಿನ ಎಲ್ಲಾ ರಸ್ತೆಗಳು ಸಹ ನಿರ್ಮಾಣ ಹಾಗೂ ಪೂಜೆ ನಡೆಯುತ್ತಿವೆ, ಗುಣಮಟ್ಟದ ಕೆಲಸ ಮಾಡಲು ತಿಳಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಶಂಕರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಡಿ.ದೊಡ್ಡಕೆಂಪಯ್ಯ, ವೇಣುಗೋಪಾಲ್‌, ಶಿವರಾಜು, ಮುಖಂಡರಾದ ಯೋಗನಂದ್‌ ಕುಮಾರ್‌, ಪಿಡಿಓ ಮಂಜುನಾಥ್‌, ಇಂಜಿನಿಯರ್‌ ಲಿಂಗರಾಜು, ಮುಖಂಡರಾದ ಮಂಜುನಾಥ್‌, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಚಿದಾನಂದ್‌, ಪರಮೇಶ್, ಗುತ್ತಿಗೆದಾರ ಶಿವಣ್ಣ ಹಾಗೂ ಗ್ರಾಮಸ್ಥರು ಭಾಗವಸಿದ್ದರು.

Get real time updates directly on you device, subscribe now.

Comments are closed.

error: Content is protected !!