ವಡವೆ ನಾಪತ್ತೆ- ದೂರು ದಾಖಲು

215

Get real time updates directly on you device, subscribe now.

ಕುಣಿಗಲ್‌: ಬ್ಯಾಂಕ್‌ನಿಂದ ವಡವೆ ಬಿಡಿಸಿಕೊಂಡು ಬಂದ ವಡವೆ ನಾಪತ್ತೆಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಕೆಂಪನಹಳ್ಳಿಗ್ರಾಮದ ಬೋರೇಗೌಡ ಎಂಬಾತ 82 ಗ್ರಾಂ ಚಿನ್ನದ ನೆಕ್‌ಲೆಸ್‌ನ್ನು ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿದ್ದು, ಸೋಮವಾರ ಅಡ ಇಟ್ಟಿದ್ದ ವಡವೆ ಬಿಡಿಸಿಕೊಂಡು ಕೈಚೀಲದೊಳಗೆ ಹಾಕಿ ಬೈಕ್‌ನ ಡಿಕ್ಕಿಯಲ್ಲಿಟ್ಟು, ಕೆಲ ದೂರದಲ್ಲಿರುವ ಫರ್ನಿಚರ್‌ ಅಂಗಡಿಗೆ ಭೇಟಿ ನೀಡಿ, ಜೊತೆಯಲ್ಲಿ ಬಂದಿದ್ದ ಮಗ ಪಾನಿಪೂರಿ ತಿನ್ನಬೇಕೆಂದು ಹೇಳಿದಾಗ ಪಾನಿಪೂರಿ ಅಂಗಡಿ ಬಳಿ ಡಿಕ್ಕಿಯಲ್ಲಿ ನೋಡಿದಾಗ ನೆಕ್‌ಲೆಸ್‌ ಇಟ್ಟಿದ್ದ ಕೈಚೀಲ ಕಾಣೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಬೋರೇಗೌಡ ಪೊಲೀಸರಿಗೆ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!