ಗ್ರಾಹಕನಿಗೆ ವಂಚಿಸಿ ಹಣ ಡ್ರಾ- ಪ್ರಕರಣ ದಾಖಲು

208

Get real time updates directly on you device, subscribe now.

ಕುಣಿಗಲ್‌: ಎಟಿಎಂ ಬಳಿ ನಗದೀಕರಿಸಲು ಹೋದ ಗ್ರಾಹಕನ ಗಮನ ಬೇರೆಡೆ ಸೆಳೆದು ನಕಲಿ ಕಾರ್ಡ್‌ ನೀಡಿ, ಗ್ರಾಹಕನ ಕಾರ್ಡ್‌ನಿಂದ ಸಾವಿರಾರು ರೂಪಾಯಿ ಅಪಹರಿಸಿರುವ ಘಟನೆ ನಡೆದಿದೆ.
ರಾಮಣ್ಣ ಎಂಬ ಗ್ರಾಹಕ ಅಗ್ರಹಾರದಲ್ಲಿನ ಎಸ್‌ಬಿಐ ಎಟಿಎಂನಿಂದ ಹಣ ನಗದೀಕರಿಸಲು ಹೋದಾಗ ಎಟಿಎಂನಿಂದ ಹಣ ಪಡೆಯಲು ಪರದಾಡುತ್ತಿದ್ದರು. ಇದನ್ನು ಗಮನಿಸಿದ ಅಪರಿಚಿತ ವ್ಯಕ್ತಿ ರಾಮಣ್ಣನವರ ಕಾರ್ಡ್‌ ಪಡೆದು ಅವರ ಖಾತೆಯಿಂದ ಹಣ ತೆಗೆದುಕೊಟ್ಟು, ಕಾರ್ಡ್‌ ತೆಗೆಯುವ ವೇಳೆ ಮೊದಲೆ ತನ್ನ ಬಳಿ ಇದ್ದ ನಕಲಿ ಕಾರ್ಡ್‌ ನೀಡಿ ಕಳಿಸಿದ್ದ, ಇದಾದ ಎರಡು ದಿನದ ನಂತರ ರಾಮಣ್ಣ ತನ್ನ ಕಾರ್ಡ್‌ ಪರಿಶೀಲಿಸಿಕೊಂಡಾಗ ನಕಲಿ ಕಾರ್ಡ್‌ ನೀಡಿರುವುದು ಬೆಳಕಿಗೆ ಬಂದಿದೆ. ಈ ವೇಳೆಗೆ ಅಪರಿಚಿತ ವ್ಯಕ್ತಿ 33,900 ರೂ. ಗಳನ್ನು ರಾಮಣ್ಣನವರ ಕಾರ್ಡ್‌ನಿಂದ ನಗದೀಕರಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!