ಬಲಿಗಾಗಿ ಕಾಯುತ್ತಿದೆ ಓವರ್‌ ಹೆಡ್‌ ಟ್ಯಾಂಕ್!

117

Get real time updates directly on you device, subscribe now.

ಶಿರಾ: ಅಪಾಯದ ಸ್ಥಿತಿಯಲ್ಲಿರುವ ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕ್‌, ನೆಲಸಮ ಮಾಡುವಂತೆ ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.
ಶಿರಾ ತಾಲೂಕಿನ ನಾದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿರುವ ಟ್ಯಾಂಕ್‌ 1991ರಲ್ಲಿ ನಿರ್ಮಾಣ ಮಾಡಲಾಗಿತ್ತು, ಇದೀಗಾ ಟ್ಯಾಂಕ್‌ ಕಂಬಗಳು ಬಿರಕು ಬಿಟ್ಟಿದ್ದು ಅಪಾಯದ ಸ್ಥಿತಿಯಲ್ಲಿರುವ ಕಾರಣ ಟ್ಯಾಂಕ್‌ಗೆ ಕಳೆದ 3 ವರ್ಷದಿಂದ ನೀರು ಬಿಟ್ಟಿಲ್ಲ, ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿ 3 ವರ್ಷ ಕಳೆದರು ಇನ್ನೂ ನೆಲಸಮ ಮಾಡಿಲ್ಲ. ರಸ್ತೆ ಬದಿಯಲ್ಲಿರುವ ಕಾರಣ ಸಾರ್ವಜನಿಕರು ಓಡಾಡುವ ಸಂದರ್ಭದಲ್ಲಿ ಟ್ಯಾಂಕ್‌ ಬಿದ್ದರೆ ಪ್ರಾಣ ಹಾನಿಯಾಗುವ ಸಂಭವ ಇದೆಯಲ್ಲದೆ ಈ ಟ್ಯಾಂಕ್‌ಗೆ ಹೊಂದಿಕೊಂಡಿರುವ ನಿವೇಶನದಲ್ಲಿ ಮನೆ ಕಟ್ಟಲು ಬಡ ಕುಟುಂಬದ ಅರುಣ್ ಗೆ ಅಪಾಯಕಾರಿ ಟ್ಯಾಂಕ್‌ ಆತಂಕ ಉಂಟು ಮಾಡಿದ್ದು ತಕ್ಷಣ ನೆಲಸಮ ಮಾಡಿ ಮುಂದಾಗುವ ಅನಾಹುತ ತಪ್ಪಿಸುವಂತೆ ಒತ್ತಾಯ ಪಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!