ಅಪಘಾತದಲ್ಲಿ ದಂಪತಿ ಸಾವು

315

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ದಂಡಿನಶಿವರ ಠಾಣಾ ವ್ಯಾಪ್ತಿಯ ತೋವಿನಕೆರೆ ಬಳಿ ಟಾಟಾ ಏಸ್‌ ಹಾಗೂ ದ್ವಿಚಕ್ರವಾಹನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮಾಸ್ತಿಗೊಂಡನಹಳ್ಳಿ ಗ್ರಾಮದ ವಾಸಿಗಳಾದ ಸಿದ್ದರಾಮಯ್ಯ (65), ಮತ್ತು ಅವರ ಪತ್ನಿ ದಾಕ್ಷಾಯಣಮ್ಮ (56) ಮೃತ ದುರ್ದೈವಿಗಳು, ಇವರು ಸ್ವಗ್ರಾಮ ಮಾಸ್ತಿಗೊಂಡನಹಳ್ಳಿಯಿಂದ ತುರುವೇಕೆರೆಯತ್ತ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ತುರುವೇಕೆರೆ ಕಡೆಯಿಂದ ಬರುತ್ತಿದ್ದ ಟಾಟಾ ಏಸ್‌ ವಾಹನಗಳು ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ, ಘಟನೆಯ ಸ್ಥಳಕ್ಕೆ ಸಿಪಿಐ ನವೀನ್‌, ಪಿಎಸ್‌ಐ ಶಿವಲಿಂಗಪ್ಪ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮೃತರ ಪುತ್ರಿ ಶೋಭಾ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿರುವ ದಂಡಿನಶಿವರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!