ಭಗತ್ ಕ್ರಾಂತಿ ಸೇನೆಯಿಂದ ಕಾರ್ಗಿಲ್ ವಿಜಯದಿವಸ್ ಆಚರಣೆ

124

Get real time updates directly on you device, subscribe now.

ತುಮಕೂರು: ಭಗತ್ ಕ್ರಾಂತಿ ಸೇನೆ ವತಿಯಿಂದ ಮಹಾನಗರಪಾಲಿಕೆ ಆವರಣದಲ್ಲಿಂದು ಕಾರ್ಗಿಲ್ ವಿಜಯೋತ್ಸವ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಭಗತ್ಕ್ರಾಂತಿ ಸೇನೆಯ ಸಂಸ್ಥಾಪಕ ಆರಾಧ್ಯ ಮಂಚುದೊರೆ ಮಾತನಾಡಿ, ಜನರ ಆಂತರಿಕ ಭದ್ರತೆಗೆ ಶ್ರಮಿಸುತ್ತಿರುವ ಪೊಲೀಸ್ ಇಲಾಖೆ ಹಾಗೂ ದೇಶದ ಗಡಿ ಕಾಯುವ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಭಗತ್ ಕ್ರಾಂತಿ ಸೇನೆಯ ವತಿಯಿಂದ ಕಳೆದ 18 ವರ್ಷಗಳಿಂದ ಈ ವಿಜಯ್ ದಿವಸ್ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ವಿಜಯ್ ದಿವಸ್ ಅನ್ನು ಸಾಂಕೇತಿಕವಾಗಿ ಆಚರಿಸಿದ್ದು, ಯುವಕರು ಉತ್ತಮ ಪೊಲೀಸ್ ಅಧಿಕಾರಿ ಹಾಗೂ ಗಡಿಭಾಗದಲ್ಲಿ ದೇಶವನ್ನು ಕಾಯುವಂತಹ ಸೈನಿಕರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕರ್ತ ವಿಷ್ಣು, ಪ್ರವೀಣ್, ವಿನಯ್, ಪ್ರಕಾಶ್, ಚಂದ್ರು, ಚೇತನ್ ಮತ್ತಿತರ ಕಾರ್ಯಕರ್ತರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!