ಜಿ.ನಾರಾಯಣ್ ಗೆ ಹುಟ್ಟು ಹಬ್ಬದ ಸಂಭ್ರಮ

533

Get real time updates directly on you device, subscribe now.

ತಿಪಟೂರು: ಜನಾನುರಾಗಿ, ಯುವಕರ ಕಣ್ಮಣಿ, ಯುವ ನೇತಾರ ಜಿಪಂ ಸದಸ್ಯ ಜಿ.ನಾರಾಯಣ್ ಅವರು ತಮ್ಮ ನಿವಾಸದಲ್ಲಿ 44ನೇ ವರ್ಷದ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡು.
ಜಿ.ನಾರಾಯಣ್ ಅಭಿಮಾನಿ ಬಳಗವು ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಾಲು-ಹಣ್ಣು ವಿತರಿಸಿ ನೆಚ್ಚಿನ ನಾಯಕನಿಗೆ ಶುಭ ಕೋರಿದರು. ಹೊನ್ನವಳ್ಳಿಯ ಆಟೋ ಚಾಲಕರಿಗೆ, ಬಡವರಿಗೆ ಇದೇ ಸಂದರ್ಭದಲ್ಲಿ ಫುಡ್ ಕಿಟ್ ವಿತರಿಸಲಾಯಿತು.
ಮಾಜಿ ಶಾಸಕ ಕೆ.ಷಡಕ್ಷರಿ ಜಿ.ನಾರಾಯಣ್ ನಿವಾಸಕ್ಕೆ ಭೇಟಿ ನೀಡಿ ಶುಭಹಾರೈಸಿ ಮುಂದಿನ ರಾಜಕೀಯ ಜೀವನದ ಬಗ್ಗೆ ಭರವಸೆ ವ್ಯಕ್ತಪಡಿಸಿದರು. ತಾಪಂ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಗ್ರಾಪಂ ಸದಸ್ಯರು, ಜಿಎನ್ ಅಭಿಮಾನಿ ಬಳಗದ ಸದಸ್ಯರು ಹೂವಿನಹಾರ ಪೇಟ, ತೊಡಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಜಿಪಂ ಕ್ಷೇತ್ರದ ಜನತೆ ಋಣ ತೀರಿಸಲು ಹಾಗೂ ಸಮಾಜ ಸೇವೆಗೆ ಮುಂದಾದಾಗ ನನ್ನನ್ನು ಗುರುತಿಸಿ ಅವಕಾಶ ಕಲ್ಪಿಸಿಕೊಟ್ಟವರು ಮಾಜಿ ಶಾಸಕ ಕೆ.ಷಡಕ್ಷರಿ ಅವರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಷಡಕ್ಷರಿ ಅವರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನನ್ನ ಕ್ಷೇತ್ರದ ಜನತೆಗೆ ಹೆಚ್ಚಿನ ಅನುದಾನ ತಂದು ಕೆಲಸ ಮಾಡಿದ್ದೇನೆ, ಜನರೇ ನನ್ನ ದೇವರು. ಅವರ ಯೋಗಕ್ಷೇಮವೇ ನನ್ನ ಸಾರ್ಥಕ ಬದುಕಾಗಿದೆ. ನನ್ನ ಕ್ಷೇತ್ರದಲ್ಲಿ ಇನ್ನೂ ಪೂರ್ಣ ಪ್ರಮಾಣದ ಸಾಕಷ್ಟು ಕೆಲಸ ಬಾಕಿ ಇದೆ, ಪಕ್ಷ ನನ್ನ ಸೇವೆಯನ್ನು ಗುರುತಿಸಿ ಪತ್ನಿ ಅನುಸೂಯಗೆ ಜಿಪಂ ಟಿಕೆಟ್ ನೀಡಿದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ಕೆಲಸ ಮಾಡುತ್ತೇನೆ, ಜನತೆಗೆ ಋಣಿಯಾಗುತ್ತೇನೆ.
। ಜಿ.ನಾರಾಯಣ್ , ಸಮಾಜ ಸೇವಕ, ಜಿಪಂ ಸದಸ್ಯ

Get real time updates directly on you device, subscribe now.

Comments are closed.

error: Content is protected !!