ಆಸ್ತಿಗಾಗಿ ತಂದೆಯನ್ನೇ ಕೊಲೆ ಮಾಡಿದ ಮಕ್ಕಳು

406

Get real time updates directly on you device, subscribe now.

ತಿಪಟೂರು: ತಂದೆ ಜೀವಮಾನವಿಡೀ ದುಡಿದು ಸಂಪಾದಿಸಿದ ಆಸ್ತಿಗಾಗಿ ಹೆಂಡತಿಯರೊಂದಿಗೆ ಸೇರಿಕೊಂಡು ಹೆತ್ತ ತಂದೆಯನ್ನೇ ಮಕ್ಕಳು ಕೊಲೆ ಮಾಡಿರುವ ಘಟನೆ ನಡೆದಿದೆ.
ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಶಂಕರಯ್ಯ(70) ಕೊಲೆಯಾದ ವೃದ್ಧ. ಶಂಕರಯ್ಯ ಕೃಷಿ ಮೂಲಕ ಗ್ರಾಮದಲ್ಲಿ ಒಂದಿಷ್ಟು ಆಸ್ತಿ ಸಂಪಾದಿಸಿದ್ದರು. ಇದರ ಮೇಲೆ ಇಬ್ಬರು ಮಕ್ಕಳು ಮತ್ತು ಸೊಸೆಯಂದಿರ ಕಣ್ಣು ಬಿದ್ದಿತ್ತು. ಈ ವಿಚಾರವಾಗಿ ಹಲವು ಬಾರಿ ತಂದೆ ಮಕ್ಕಳ ನಡುವೆ ಮನೆಯಲ್ಲಿ ಗಲಾಟೆಗಳು ನಡೆದಿದ್ದವು. ಆದರೆ ಈ ಬಾರಿ ನಡೆದ ಗಲಾಟೆ ತಂದೆಯ ಕೊಲೆಯಲ್ಲಿ ಅಂತ್ಯವಾಗಿದೆ.
ಆರೋಪಿಗಳಾದ ಶಂಕರಯ್ಯನ ಮಕ್ಕಳಾದ ಮಲ್ಲೇಶ್, ಆತನ ಪತ್ನಿ ಬಸಮ್ಮ, ನಾಗರಾಜ ಆತನ ಪತ್ನಿ ಕಲ್ಪನಾಳಿಂದ ಕೃತ್ಯ ನಡೆದಿದೆ ಎನ್ನಲಾಗಿದೆ.
ಆರೋಪಿಗಳು ಆಸ್ತಿ ಬರೆದುಕೊಡುವಂತೆ ಶಂಕರಯ್ಯನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ತೀವ್ರ ರಕ್ತ ಸ್ರಾವದಿಂದ ಒದ್ದಾಡುತ್ತಿದ್ದ ಶಂಕರಯ್ಯನನ್ನು ತಿಪಟೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೇ ಮೃತರಾಗಿದ್ದಾರೆ. ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Get real time updates directly on you device, subscribe now.

Comments are closed.

error: Content is protected !!