ಅಗ್ನಿ ಅವಘಡದಿಂದ 4 ರಾಸು ಭಸ್ಮ

274

Get real time updates directly on you device, subscribe now.

ಹುಳಿಯಾರು: ದನದ ಕೊಟ್ಟಿಗೆಗೆ ಬೆಂಕಿ ಬಿದ್ದು 4 ರಾಸುಗಳು ಹಾಗೂ ದ್ವಿಚಕ್ರ ವಾಹನ ಸುಟ್ಟು ಭಸ್ಮವಾದ ಘಟನೆ ಹಂದನಕೆರೆ ಹೋಬಳಿಯ ಮತ್ತಿಘಟ್ಟ ಗ್ರಾಮ ಪಂಚಯಿತಿ ವ್ಯಾಪ್ತಿಯ ಮಾದಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮಾದಾಪುರ ಗ್ರಾಮದ ಪರಮೇಶ ಎಂಬುವರಿಗೆ ಸೇರಿದ ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ. ಎಂದಿನಂತೆ ತೋಟದಲ್ಲಿನ ದನದ ಕೊಟ್ಟಿಗೆಗೆ ರಾಸುಗಳನ್ನು ಕಟ್ಟಿ ಮನೆಗೆ ಬಂದು ಮಲಗಿದ್ದಾರೆ. ಮಧ್ಯರಾತ್ರಿಯಲ್ಲಿ ಬೆಂಕಿ ಬಿದ್ದಿದ್ದು ಬೆಳಗಿನಜಾವ ಬಹಿರ್ದೆಸೆಗೆ ಬಂದವರು ಗಮನಿಸಿ ಪರಮೇಶ್‌ಗೆ ವಿಷಯ ತಿಳಿಸಿದ್ದಾರೆ.
ಪರಮೇಶ್‌ ಹಾಗೂ ಗ್ರಾಮಸ್ಥರು ಬಂದು ನೋಡುವಷ್ಟರಲ್ಲಿ ದನದ ಕೊಟ್ಟಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿ ಬೆಂಕಿಯ ಕೆನ್ನಾಲಿಗೆಗೆ ಎರಡು ಹೋರಿ, ಎರಡು ಕರು ಸೇರಿದಂತೆ ಒಂದು ಟಿವಿಎಸ್‌ ಎಕ್ಸೆಲ್‌ ವಾಹನ ಸುಟ್ಟು ಕರಕಲಾಗಿದೆ.
ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ, ಘಟನಾ ಸ್ಥಳಕ್ಕೆ ಹಂದನಕೆರೆ ಪೊಲೀಸ್‌ ಠಾಣಾಧಿಕಾರಿ ಶಿವಪ್ಪ ಮತ್ತು ಸಿಬಂಧಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!