ಜೂಜಾಟ 11 ಮಂದಿ ಬಂಧನ, 14,650 ನಗದು ವಶ

341

Get real time updates directly on you device, subscribe now.

ತುರುವೇಕೆರೆ: ಪಟ್ಣಣದ ಗ್ರೀನ್ ಲ್ಯಾಂಡ್ ಡಾಬಾ ಬಳಿ ಜೂಜಾಟದಲ್ಲಿ ತೊಡಗಿದ್ದ 11 ಮಂದಿಯನ್ನು ಬಂಧಿಸಿರುವ ತುರುವೇಕೆರೆ ಪೋಲೀಸರು 14,650 ರೂಗಳನ್ನು ವಶಪಡಿಸಕೊಂಡು ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣದ ಗ್ರೀನ್ ಲ್ಯಾಂಡ್ ಡಾಬಾ ಬಳಿ ಜೂಜಾಟ ನೆಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿ.ಪಿ.ಐ. ನವೀನ್ ಹಾಗೂ ಪಿ.ಎಸ್.ಐ. ಕೇಶವ ಮೂರ್ತಿ ನೇತೃತ್ವದ ತಂಡ ದಾಳಿ ನೆಡೆಸಿತು. ದಾಳಿ ವೇಳೆ 14,650 ನಗದು ,1 ಓಮ್ನಿ ಕಾರು, 6 ದ್ವಿಚಕ್ರವಾಹನ, 12ಮೋಬೈಲ್. 52 ಇಸ್ಪೀಟ್ ಎಲೆಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ದೊಂಬರನಹಳ್ಳಿಯ ಲಿಂಗದೇವರು, ತೀರ್ಥ ಕುಮಾರ, ಮಂಜುನಾಥ, ದೇವೇಗೌಡ ಬಡಾವಣೆಯ ಉಮೇಶ, ತಿಮ್ಮೇಗೌಡ, ವೆಂಕಟೇಶ, ಸಾದಿಕ್, ವಿದ್ಯಾನಗರದ ಕಿಶೋರ್, ಅಶೋಕ್ ಕುಮಾರ, ಶ್ರೀನಿವಾಸ್, ಶಕ್ತಿನಗರದ ಚರಣ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!