ಬೈಕ್‌ ಡಿಕ್ಕಿಯಲ್ಲಿದ್ದ 2 ಲಕ್ಷ ನಗದು ಅಪಹರಣ

581

Get real time updates directly on you device, subscribe now.

ಕುಣಿಗಲ್‌: ಬೈಕ್‌ನ ಡಿಕ್ಕಿಯಲ್ಲಿದ್ದ ಎರಡು ಲಕ್ಷ ರೂ. ನಗದು ಅಪಹರಿಸಿರುವ ಘಟನೆ ಪಟ್ಟಣದ ಕೆಆರ್‌ಎಸ್‌ ಅಗ್ರಹಾರದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದ ಸತೀಶ್‌ ಎಂಬುವವರು ತಮ್ಮ ಮನೆ ನಿರ್ಮಾಣ ನಿಟ್ಟಿನಲ್ಲಿ ಎರಡುವರೆ ಲಕ್ಷರೂ. ಗಳನ್ನು ಕೆಆರ್‌ಎಸ್‌ ಅಗ್ರಹಾರದ ಡಿಸಿಸಿ ಬ್ಯಾಂಕಿನಲ್ಲಿ ನಗದೀಕರಿಸಿಕೊಂಡು, ಬೈಕ್‌ನ ಡಿಕ್ಕಿಯಲ್ಲಿಟ್ಟುಕೊಂಡು ಸಮೀಪದಲ್ಲೆ ತಮ್ಮ ಸ್ನೇಹಿತನನ್ನು ನೋಡಲು ಹೋದರು, ಸ್ನೇಹಿತನ ಮನೆ ಸಮೀಪ ಬೈಕ್‌ ನಿಲ್ಲಿಸಿ, ಒಳಗೆ ಹೋಗಿ ಹೊರ ಬಂದಾಗ ಬೈಕ್‌ನ ಡಿಕ್ಕಿ ಜಖಂ ಆಗಿರುವುದು ಕಂಡು ಬಂದಿದ್ದು ಅದರಲ್ಲಿದ್ದ ಎರಡು ಲಕ್ಷ ರೂ. ನಗದು ಕಳುವಾಗಿದೆ, ಘಟನೆಗೆ ಸಂಬಂಧಿಸಿದಂತೆ ಸತೀಶ್‌ ಕುಣಿಗಲ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ತಿಂಗಳು ಇದೆ ಮಾದರಿಯಾಗಿ ಬ್ಯಾಂಕ್‌ನಿಂದ ವಡವೆ ಬಿಡಿಸಿಕೊಂಡು ಬೈಕ್‌ ಡಿಕ್ಕಿಯಲ್ಲಿಟ್ಟುಕೊಂಡು ಹೋಗುತ್ತಿದ್ದ ವ್ಯಕ್ತಿಯ ಚಿನ್ನಾಭರಣವನ್ನು ಇದೆ ಮಾದರಿಯಲ್ಲಿ ಕಳವು ಮಾಡಲಾಗಿತ್ತು.

Get real time updates directly on you device, subscribe now.

Comments are closed.

error: Content is protected !!