ಬೈಕ್‌ಗಳ ನಡುವೆ ಡಿಕ್ಕಿ- ಸವಾರರಿಬ್ಬರು ಸಾವು

571

Get real time updates directly on you device, subscribe now.

ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಕೊಂಡವಾಡಿ ಗ್ರಾಮದ ಚಂದ್ರಶೇಖರ್‌ ಎಂಬುವವರ ತೋಟದ ಸಮೀಪ ಬುಧವಾರ ಬೆಳಗ್ಗೆ ಬೈಕ್‌ಗಳ ನಡುವೆ ಡಿಕ್ಕಿಯಾದ ಪರಿಣಾಮ ಸವಾರರಿಬ್ಬರೂ ಸಾವನ್ನಪ್ಪಿರುವ ಘಟನೆ ಕೊಡಿಗೇನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಪುರವರ ಹೋಬಳಿಯ ಕೊಂಡವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ದಯಾನಂದ್‌ (35) ಎಂಬುವವರು ತಮ್ಮ ಸ್ವಗ್ರಾಮ ಇಮ್ಮಡಗೊಂಡನಹಳ್ಳಿಯ ರಾಮನಹಳ್ಳಿಯಿಂದ ಕೊಂಡವಾಡಿ ಶಾಲೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಹುಣಸವಾಡಿ ಗ್ರಾಮದ ನರಸಿಂಹಮೂರ್ತಿ (38) ಎಂಬುವವರು ತನ್ನ ದ್ವಿಚಕ್ರ ವಾಹನದಲ್ಲಿ ಕೊಂಡವಾಡಿ ಕಡೆಯಿಂದ ಅರಳಾಪುರದ ಕಡೆ ಬರುತ್ತಿದ್ದಾಗ ಕೊಂಡವಾಡಿ ಅರಳಾಪುರ ರಸ್ತೆಯ ತುಮುಲ್‌ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಅವರ ತೋಟದ ಬಳಿ ಬೈಕ್‌ಗಳೆರೆಡು ಮುಖಾಮುಖಿಯಾಗಿವೆ.
ನರಸಿಂಹಮೂರ್ತಿ ಸ್ಥಳದಲ್ಲೇ ಮೃತಪಟ್ಟರೆ ಗಂಭೀರ ಸ್ಥಿತಿಯಲ್ಲಿದ್ದ ಶಿಕ್ಷಕ ದಯಾನಂದ್‌ ಅವರು ತುಮಕೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ, ಸ್ಥಳಕ್ಕೆ ಮಧುಗಿರಿ ಸಿಪಿಐ ಎಂ.ಎಸ್‌.ಸರ್ದಾರ್‌ ಮತ್ತು ಕೊಡಿಗೇನಹಳ್ಳಿ ಪಿಎಸ್‌ಐ ಜೆ.ಆರ್‌.ನಾಗರಾಜು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದು, ಕೊಡಿಗೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!