ಸರ ಕಸಿದು ಕಳ್ಳರು ಪರಾರಿ

257

Get real time updates directly on you device, subscribe now.

ಕೊರಟಗೆರೆ: ನೀರು ಕುಡಿಯುವ ನೆಪವೊಡ್ಡಿ ಅಪರಿಚಿತ ವ್ಯಕ್ತಿಗಳು ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿರುವ ಘಟನೆ ಕೊರಟಗೆರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬುಡ್ಡೇನಹಳ್ಳಿ ಗ್ರಾಮದ ಜಯಮ್ಮ ಎನ್ನುವ ವೃದ್ಧೆ ಶುದ್ಧ ಕುಡಿಯುವ ನೀರನ ಘಟಕದಲ್ಲಿ ನೀರು ಹಿಡಿಯುತ್ತಿರುವಾಗ ನೀರು ಕುಡಿಯಬೇಕು ಎಂದು ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ವೃದ್ಧೆಯ ಬಳಿ ಇದ್ದ 40 ಗ್ರಾಂ ಚಿನ್ನದ ಸರಕ್ಕೆ ಕೈಹಾಕಿದ್ದಾರೆ. ಇದೆ ಸಂದರ್ಭದಲ್ಲಿ ವೃದ್ದೆ ಕಿರುಚಾಡಿದಾಗ ಸಾರ್ವಜನಿಕರು ಬರುವುದನ್ನ ಕಂಡ ಕಳ್ಳರು 10 ಗ್ರಾಂ ನಷ್ಟು ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್‌ಐ ಮುತ್ತುರಾಜು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!