ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಮನೆ- ಸುಟ್ಟು ಕರಕಲಾದ ವೃದ್ಧ

498

Get real time updates directly on you device, subscribe now.

ತುಮಕೂರು: ಬುಧವಾರ ಬೆಳಗಿನ ಜಾವ ಮನೆಗೆ ಬೆಂಕಿ ಬಿದ್ದು ವೃದ್ಧನೊಬ್ಬ ಸುಟ್ಟು ಕರಕಲಾಗಿರುವ ಘಟನೆ ತುಮಕೂರು ತಾಲೂಕು ಬೆಳ್ಳಾವಿ ಪೋಲಿಸ್‌ ಠಾಣೆ ವ್ಯಾಪ್ತಿಯ ಅಸ್ತಿಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಈ ಗ್ರಾಮದ ವಾಸಿ ದೊಡ್ಡಬಸವಯ್ಯ (70) ಮೃತ ದುರ್ದೈವಿ, ಬೆಳಗಿನ ಜಾವ 4.30 ರಲ್ಲಿ ನಡೆದ ಘಟನೆ ನಡೆದಿದೆ. ಮನೆಯಲ್ಲಿ ಗಂಡ, ಹೆಂಡತಿ ವಾಸವಿದ್ದರು, ಹೆಂಡತಿ ಸೋಮವಾರ ಸಂಬಂಧಿಕರ ಊರಾದ ಸೋಮಲಾಪುರಕ್ಕೆ ಹೋಗಿದ್ದರು, ಮನೆಯಲ್ಲಿ ದೊಡ್ಡ ಬಸವಯ್ಯ ಮಾತ್ರ ಇದ್ದರು, ಈ ಸಂದರ್ಭದಲ್ಲಿ ವಿದ್ಯುತ್‌ ಇಲ್ಲದ ಕಾರಣ ದೀಪ ಹಚ್ಚಿಡಲಾಗಿತ್ತು, ಅದೇಗೋ ಮನೆಗೆ ಬೆಂಕಿ ಆವರಿಸಿ ವೃದ್ಧ ಸಾವನ್ನಪ್ಪಿದ್ದಾರೆ.
ಬೆಳ್ಳಾವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಬ್‌ ಇನ್ಸ್ಪೆಕ್ಟರ್‌ ಹನುಮಂತರಾಯಪ್ಪ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ರಾಮಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!