ಪ್ರೀತಿಸಿದ ಹುಡುಗಿ ಸಿಗದಿದ್ದಕ್ಕೆ ಪ್ರೇಮಿ ನೇಣಿಗೆ ಶರಣು

979

Get real time updates directly on you device, subscribe now.

ಶಿರಾ: ಪ್ರೀತಿಸಿದ ಹುಡುಗಿ ಸಿಕ್ಕಲಿಲ್ಲ ಎನ್ನುವ ಕಾರಣಕ್ಕೆ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ನಗರದ ಎಪಿಎಂಸಿ ಯಾರ್ಡ್ ನಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಇಲ್ಲಿನ ಜ್ಯೋತಿನಗರ ಬಡಾವಣೆಯ ಮೋಹನ್‌ ಕುಮಾರ್‌ (25) ಎನ್ನುವ ಯುವಕನೇ ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದು, ನಗರದ ನಾಯಕರಹಟ್ಟಿ ಬಡಾವಣೆಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಹುಡುಗಿಗೆ ಮದುವೆ ನಿಶ್ಚಯಗೊಂಡಿದ್ದರಿಂದ ತೀವ್ರ ಹತಾಶನಾಗಿದ್ದ ಯುವಕ ನೇಣಿಗೆ ಕೊರಳೊಡ್ಡಿದ್ದಾನೆ. ತನ್ನ ಸಾವಿಗೆ ಯಾರೂ ಹೊಣೆಗಾರರಲ್ಲ ಎಂದು ಯುವಕ ಮರಣಕ್ಕೂ ಮುನ್ನ ಚೀಟಿಯೊಂದರಲ್ಲಿ ಬರೆದಿಟ್ಟು ಮಂಗಳವಾರ ತಡ ರಾತ್ರಿ ಸಾವಿಗೆ ಶರಣಾಗಿದ್ದಾನೆ ಎನ್ನುವ ಮಾತು ಕೇಳಿಬಂದಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ನಿತ್ಯ ವಾಕಿಂಗ್‌ಗೆ ಬರುವ ನಾಗರಿಕರಿಂದ ಬುಧವಾರ ಬೆಳಗ್ಗೆ ವಿಷಯ ಬೆಳಕಿಗೆ ಬಂದಿದೆ. ಸ್ಥಳ ಪರಿಶೀಲನೆ ನಡೆಸಿರುವ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!