ತುಕಾಲಿ ವೆಂಕಟೇಶ್ ಗೆ ಪಿತೃವಿಯೋಗ

599

Get real time updates directly on you device, subscribe now.

ತುಮಕೂರು: ನಗರದ ಸೋಮೇಶ್ವರ ಮುಖ್ಯ ರಸ್ತೆಯಲ್ಲಿ ವಾಸವಿದ್ದ ತಿಗಳ ಮುಖಂಡರು ಹಾಗೂ ಅಂಗಡಿ ಕೆಂಪಣ್ಣ ಎಂದೇ ಹೆಸರಾದ ಟಿ.ವಿ.ಕೆಂಪಯ್ಯ (89) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ವೀಡಿಯೋ ಜರ್ನಲಿಸ್ಟ್ ಆಗಿ ಕಳೆದ 20 ವರ್ಷದಿಂದ ತುಕಾಲಿ ಟಿವಿ, ಅಮೋಘ ಟಿವಿ, ಉದಯ ಟಿವಿಯಲ್ಲಿ ಕೆಲಸ ನಿರ್ವಹಿಸಿದ್ದ ವೆಂಕಟೇಶ್‌ ಅವರ ತಂದೆ ಟಿ.ವಿ.ಕೆಂಪಯ್ಯ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಪತ್ನಿ ಸೇರಿ ಮೂವರು ಗಂಡು ಮಕ್ಕಳು, ಓರ್ವ ಮಗಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ತುಮಕೂರಿನ ಗಣ್ಯರು, ಪತ್ರಕರ್ತರು ಕಂಬನಿ ಮಿಡಿದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!