ಶ್ರೀಗಂಧದ ಮರ ಕಳ್ಳತನ

217

Get real time updates directly on you device, subscribe now.


ತುರುವೇಕೆರೆ: ಜಿಲ್ಲೆಯ ಕುಣಿಗಲ್‌ ತಾಲೂಕಿನಲ್ಲಿ ಶ್ರೀಗಂಧ ಕಳ್ಳತನಕ್ಕೆ ಮುಂದಾಗಿದ್ದ ವೇಳೆ ಗುಂಡು ತಗುಲಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ತುರುವೇಕೆರೆ ತಾಲೂಕಿನ ಬಿಗನೇನಹಳ್ಳಿ ಗ್ರಾಮದ ತೋಟವೊಂದರಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ರಾತ್ರೋ ರಾತ್ರಿ ಕಡಿದು ಹೊತ್ತೊಯ್ಯುವ ಮೂಲಕ ಶ್ರೀಗಂಧ ಕಳ್ಳರು ಮತ್ತೆ ತಮ್ಮ ಕರಾಮತ್ತು ಪ್ರದರ್ಶಿಸಿದ್ದಾರೆ.
ಬಿಗನೇನಹಳ್ಳಿ ಗ್ರಾಮದ ರೈತ ಬಿ.ಎಸ್‌.ರವೀಂದ್ರಕುಮಾರ್‌ ತಮ್ಮ ತೋಟದಲ್ಲಿ ಶ್ರೀಗಂಧ ಬೆಳೆದಿದ್ದಾರೆ. ಕಳ್ಳರು ರಾತ್ರಿ ವೇಳೆ ಶ್ರೀಗಂಧ ಕದ್ದೊಯ್ದಿರುವ ಘಟನೆಯಿಂದ ಆತಂಕಗೊಂಡಿದ್ದಾರೆ. ಉಳಿದ ಶ್ರೀಗಂಧವನ್ನು ರಕ್ಷಣೆ ಮಾಡುವುದು ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಿದ ಅವರು ಅರಣ್ಯ ಇಲಾಖೆ ಶ್ರೀಗಂಧ ಕಳ್ಳರನ್ನು ನಿಯಂತ್ರಿಸುವ ಮಾರ್ಗೋಪಾಯ ರೂಪಿಸುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿಗೆ ರೈತ ಬಿ.ಎಸ್‌.ರವೀಂದ್ರಕುಮಾರ್‌ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!