ಸಾಕು ನಾಯಿ ಎತ್ತೊಯ್ದ ಚಿರತೆ

330

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ದಬ್ಬೇಘಟ್ಟ ಹೋಬಳಿ ಹಿಂಡಮಾರನಹಳ್ಳಿ ಗ್ರಾಮದ ಹೆಚ್.ಜಿ.ಪ್ರಕಾಶ್ ಅವರ ಮನೆಯ ಸಾಕು ನಾಯಿಯನ್ನು ಚಿರತೆ ಮಂಗಳವಾರ ರಾತ್ರಿ ಎಳೆದೊಯ್ದಿರುವ ಘಟನೆ ನಡೆದಿದೆ.
ಹಿಂಡಮಾರನಹಳ್ಳಿ ಗ್ರಾಮದ ಕೃಷಿಕ ಹೆಚ್.ಜಿ.ಪ್ರಕಾಶ್ ಗ್ರಾಮಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡು ತನ್ನ ಕುಟುಂದೊಂದಿಗೆ ವಾಸವಿದ್ದರು. ಕಳೆದ ಮಂಗಳವಾರ ರಾತ್ರಿ ಗ್ರಾಮ ಪ್ರವೇಶಿಸಿರುವ ಚಿರತೆ ನಾಯಿಯನ್ನು ಎತ್ತೊಯ್ದಿದ್ದು, ಘಟನೆಯಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬೀಳುವಂತಾಗಿದೆ.
ಘಟನೆ ಕುರಿತಂತೆ ಸ್ಥಳೀಯ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಗ್ರಾಮದ ಆಸುಪಾಸಿನಲ್ಲಿ ಚಿರತೆಯ ಸಂಚಾರದ ಮೇಲೆ ನಿಗಾವಹಿಸುವಂತೆ ಪ್ರಕಾಶ್ ಹಾಗೂ ಗ್ರಾಮಸ್ಥರಾದ ಕುಮಾರಸ್ವಾಮಿ ಮತ್ತಿತರರು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!