ಕಾರು ಡಿಕ್ಕಿ- ಇಬ್ಬರು ಸಾವು

236

Get real time updates directly on you device, subscribe now.

ಕೊಡಿಗೇನಹಳ್ಳಿ: ತೋಟಕ್ಕೆ ಅಳವಡಿಸಲು ಮೋಟರ್‌ ರಿಪೇರಿ ಮಾಡಿಸಿಕೊಂಡು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಇಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹೋಬಳಿ ಮುದ್ದೇನಹಳ್ಳಿ ಗೇಟ್ ನ ಸೀಮಾಂಧ್ರ- ಕರ್ನಾಟಕ ಗಡಿಯಲ್ಲಿ ಮಂಗಳವಾರ ರಾತ್ರಿ 9 ಗಂಟೆ ಸಮಯದಲ್ಲಿ ಹಿಂದೂಪುರದ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದ್ವಿಚಕ್ರ ವಾಹನ ಮತ್ತು ಅಪರಿಚಿತ ಕಾರಿನ ನಡುವೆ ಅಪಘಾತದಲ್ಲಿ ಅಣ್ಣೇನಹಳ್ಳಿಯ ಹನುಮಂತ ರೆಡ್ಡಿ (55) ಮತ್ತು ಓಬಳೇಶ್‌ (45) ಮೃತಪಟ್ಟಿದ್ದು, ಅಪಘಾತಗೊಳಿಸಿದ ಚಾಲಕ ಗಾಬರಿಗೊಂಡು ದಿಚಕ್ರ ವಾಹನ ಒಂದು ಕಡೆ ಮೃತ ಶವಗಳನ್ನು ಮತ್ತೊಂದು ಕಡೆ ಹಾಕಿ ಕಾಲ್ಕಿತ್ತಿದ್ದಾರೆ.
ಕೊಲೆ ರೀತಿಯಲ್ಲಿ ಶವಗಳನ್ನು ರಸ್ತೆ ಪಕ್ಕಕ್ಕೆ ಎರಡು ಶವಗಳನ್ನು ಬಿಸಾಡಿ ಅಪಘಾತಗೊಳಿಸಿದ ಖತರ್ನಾಕ್‌ ಚಾಲಕ ಕಾರು ಸಮೇತ ಪರಾರಿಯಾಗಿದ್ದು, ಸ್ಥಳದಲ್ಲಿ ಕಾರಿನ ಗಾಜಿನ ಪೀಸುಗಳು ಹಾಗೂ ಇತರೆ ಗುರುತು ಪತ್ತೆಯಾಗಿದ್ದು ರಾತ್ರಿ ಮದ್ಯದ ಅಮಲಿನಲ್ಲಿ ಕಿಯಾ ಕಾರೊಂದು ರಂಪಾಟ ಮಾಡಿಕೊಂಡು ಚಲಾಯಿಸಿಕೊಂಡು ಹೋಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿಗಳ ಕುಟುಂಬಸ್ಥರು ಇಡೀ ರಾತ್ರಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಡುತ್ತಿರುವಾಗ ಎರಡು ಶವ ಮುಳ್ಳಿನ ಪೊದೆಗಳಲ್ಲಿ ಸಿಕ್ಕಿದ್ದು ತಕ್ಷಣ ಸ್ಥಳಕ್ಕೆ ಸಿಪಿಐ ಎಂ.ಎಸ್‌.ಸರ್ದಾರ್‌ ಹಾಗೂ ಪಿಎಸೈ ನಾಗರಾಜು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!