ದ್ವೇಷಕ್ಕೆ ಅಡಿಕೆ ಗಿಡ ನಾಶ

253

Get real time updates directly on you device, subscribe now.

ಕುಣಿಗಲ್‌: ವೈಯುಕ್ತಿಕ ದ್ವೇಷಕ್ಕೆ ಅಡಿಕೆ ಗಿಡಗಳನ್ನು ನಾಶ ಮಾಡಿರುವ ಘಟನೆ ಕುಣಿಗಲ್‌ ಪೊಲೀಸ್‌ಠಾಣೆ ವ್ಯಾಪ್ತಿಯ ದಾಸನಪುರ ಗ್ರಾಮದಲ್ಲಿ ನಡೆದಿದೆ.
ಕೊತ್ತಗೆರೆ ಹೋಬಳಿಯ ದಾಸನಪುರ ಗ್ರಾಮದ ಬೆಟ್ಟಸ್ವಾಮಿ ಎಂಬಾತ ತನ್ನ 1.31 ಎಕರೆ ಜಮೀನಿನಲ್ಲಿ ಅಡಿಕೆ, ಬಾಳೆ ಗಿಡ ಬೆಳೆ ಕೈಗೊಂಡಿದ್ದರು. ಅಡಿಕೆ ಬೆಳೆ ಒಂದು ವರ್ಷದ ಗಿಡಗಳಾಗಿದ್ದು ಮಂಗಳವಾರ ರಾತ್ರಿ 330 ಗಿಡಗಳನ್ನು ದುಷ್ಕರ್ಮಿಗಳು ಕಿತ್ತುಹಾಕಿ ನಾಶ ಮಾಡಿದ್ದು ಇದರಿಂದ ಎರಡುವರೆ ಲಕ್ಷ ರೂ. ನಷ್ಟವಾಗಿದೆ, ಇದಕ್ಕೆ ಗ್ರಾಮದ ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿ ಬೆಟ್ಟಸ್ವಾಮಿ ಕುಣಿಗಲ್‌ ಪೊಲೀಸರಿಗೆ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!