ಶ್ರೀಗಂಧ ಕಳ್ಳರ ಬಂಧನ

279

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಮಾದುಗೋನಹಳ್ಳಿ ಗ್ರಾಮದ ಹಳ್ಳದಲ್ಲಿ ಶ್ರೀಗಂಧ ಕಳ್ಳ ಸಾಗಾಣೆ ಮಾಡುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾಲು ಸಮೇತ ಬಂಧಿಸಿದ್ದಾರೆ.
ಬಂಧಿತರನ್ನು ತಾಲೂಕಿನ ಇಲಿಗರಪಾಳ್ಯದ ಕೆಂಪಯ್ಯ, ರಾಜೇಂದ್ರಪುರ ಗ್ರಾಮದ ಪಾಪಯ್ಯ ಮತ್ತು ರಾಮನಗರ ತಾಲೂಕಿನ ಯರೇಹಳ್ಳಿಯ ಮುನಿರಾಜು ಎಂದು ಗುರುತಿಸಲಾಗಿದೆ. ಬಂಧಿತರು ಕಳೆದ ಮಂಗಳವಾರ ರಾತ್ರಿ ಮಾದುಗೋನ ಹಳ್ಳಿಯ ಹಳ್ಳದಲ್ಲಿ ಶ್ರೀಗಂಧ ಸಾಗಿಸುತ್ತಿದ್ದ ವೇಳೆ ಉಪವಲಯ ಅರಣ್ಯಾಧಿಕಾರಿ ಮಹೇಶ್‌, ಅರಣ್ಯ ರಕ್ಷಕರಾದ ಅಂಜನಮೂರ್ತಿ, ಶೇಖರ್‌ ಸಿಬ್ಬಂದಿ ದಾಳಿ ನಡೆಸಿ ಬಂಧಿಸಿ, ಬಂಧಿತರಿಂದ 8 ಕೆಜಿ ಶ್ರೀಗಂಧ, ಮಚ್ಚು, ತುಂಡಾದ ಸಾಮಿಲ್‌ ಗರಗಸ, ಮೂರು ಟಾರ್ಚ್‌ ವಶಪಡಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!