ಲಾರಿಗೆ ಬೈಕ್‌ ಡಿಕ್ಕಿ- ಸವಾರ ಸಾವು

114

Get real time updates directly on you device, subscribe now.

ಮಧುಗಿರಿ: ದ್ವಿಚಕ್ರ ವಾಹನ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಗಿರಿಯಮ್ಮನಪಾಳ್ಯದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಪಾವಗಡ ತಾಲ್ಲೂಕಿನ ಸಾರವಾಟಪುರ ಗ್ರಾಮದ ಶಾಂತಕುಮಾರ್‌ (25) ಶುಕ್ರವಾರ ಬೆಳಗ್ಗೆ ಮಿಡಿಗೇಶಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಕೈಗಾರಿಕೆ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶಾಂತಕುಮಾರ್‌ ಬೆಳ್ಳಂಬೆಳಗ್ಗೆ 3.30 ರ ಸಮಯದಲ್ಲಿ ಸ್ವಗ್ರಾಮ ಸಾರವಾಟಪುರದಿಂದ ಬೈಕ್ ನಲ್ಲಿ ಹೊರಟಿದ್ದರು. ಮಿಡಗೇಶಿ ಸಮೀಪದ ಗಿರಿಯಮ್ಮನಪಾಳ್ಯ ಬಳಿ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಿಡಿಗೇಶಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!